ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ತಮ್ಮ ಸಿಬ್ಬಂದಿ ವರ್ಗಕ್ಕೆ ದೀಪಾವಳಿಗೆ ಮುಂಬಡ್ತಿ ಕೊಡುಗೆ ನೀಡಿದ್ದಾರೆ.
ಇಬ್ಬರು ಸಿವಿಲ್ ಹೆಡ್ ಕಾನ್ಸ್ ಟೆಬಲ್’ಗೆ ಎಎಸ್ಐ ಹುದ್ದೆ ಹಾಗೂ ಇಬ್ಬರು ಸಿವಿಲ್ ಪೊಲೀಸ್ ಕಾನ್ಸ್’ಟೆಬಲ್’ಗೆ ಸಿ.ಎಚ್.ಸಿ ಹುದ್ದೆಗೆ, ಓರ್ವ ಎ.ಎಚ್.ಸಿಗೆ ಎ.ಆರ್.ಎಸ್.ಐ. ಹುದ್ದೆ ಹಾಗೂ 2 ಎಪಿಸಿಗೆ ಎ.ಎಚ್.ಸಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶಿಸಿದ್ದಾರೆ.
* ಮುಂಬಡ್ತಿ ವಿವರ: ಶಿವಮೊಗ್ಗ ಟ್ರಾಫಿಕ್ ಪಶ್ಚಿಮ ಠಾಣೆಯ ಸಿ.ಎಚ್.ಸಿ ಮಹೇಂದ್ರ ಕುಮಾರ್ ಅವರಿಗೆ ನಗರ ಪೊಲೀಸ್ ಠಾಣೆಯ ಎಎಸ್ಐ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
ತುಂಗಾನಗರ ಪೊಲೀಸ್ ಠಾಣೆ ಸಿ.ಎಚ್.ಸಿ ನಾಗರಾಜ್ ಅವರಿಗೆ ಜೋಗ ಪೊಲೀಸ್ ಠಾಣೆಯ ಎಎಸ್ಐ ಹುದ್ದೆಗೆ ಮುಂಬಡ್ತಿ ನೀಡಿದೆ.
* ಸಿಪಿಸಿಯಿಂದ ಸಿ.ಎಚ್.ಸಿ ಹುದ್ದೆ:
ಟ್ರಾಫಿಕ್ ಪೂರ್ವ ಠಾಣೆಯ ಪ್ರವೀಣ್ ಪಾಟೀಲ್, ಪೇಪರ್ ಟೌನ್ ಪೊಲೀಸ್ ಠಾಣೆ ಕುಮಾರ್ ನಾಯ್ಕ.
* ಎ.ಎಚ್.ಸಿಯಿಂದ : ಶಿವಮೊಗ್ಗ ಡಿಎಆರ್ ಎಸ್.ವಿ.ಮೇಘರಾಜ್ ಅವರಿಗೆ ಎಆರ್.ಎಸ್.ಐ ಹುದ್ದೆ ಮುಂಬಡ್ತಿ ನೀಡಲಾಗಿದೆ.
ಕೆ. ಪ್ರಕಾಶ್ ಮತ್ತು ತೀರ್ಥ ನಾಯ್ಕ ಅವರಿಗೆ ಎಪಿಸಿ ಹುದ್ದೆಯಿಂದ ಎ.ಹೆಚ್.ಸಿ. ಹುದ್ದೆಗೆ ಮುಂಬಡ್ತಿ ಮಾಡಲಾಗಿದೆ.