ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ಕೆಲವು ತಾಂಡಾಗಳಲ್ಲಿ ಕೈಸ್ತç ಮಿಷನರಿಗಳು ಮತಾಂತರ ಮಾಡುತ್ತಿರುವುದಾಗಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ನಾಯ್ಕ ಆರೋಪಿಸಿದರು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಂಜಾರಾ ಸಮುದಾಯ ಹಿಂದುಳಿದೆ. ಇದನ್ನು ಬಂಡವಾಳವಾಗಿ ಬಳಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
`ಮತಾಂತರ ಆಗುವುದಕ್ಕೆ ನಮ್ಮಿಂದ ಯಾವುದೇ ರೀತಿಯ ವಿರೋಧವಿಲ್ಲ. ಆದರೆ, ಅದನ್ನು ಬಲವಂತದಿಂದ ಮಾಡಿದ್ದಲ್ಲಿ ಸಹಿಸುವುದಿಲ್ಲ’ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಆರ್.ಜಗದೀಶ್, ಉಪಾಧ್ಯಕ್ಷ ಕೆ.ಜಿ.ನಾಗೇಶ್ ನಾಯ್ಕ, ಧರ್ಮಾ ನಾಯ್ಕ, ಉಮಾಮಹೇಶ್ವರ ನಾಯ್ಕ, ಡಾಕಾ ನಾಯ್ಕ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.