ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್’ಗೆ ಇದೇ ಮೊದಲ ಸಲ ಚುನಾವಣೆ ನಡೆದರೂ ಅಭ್ಯರ್ಥಿಯ ಆಯ್ಕೆ ಮಾತ್ರ ಅವಿರೋಧವಾಗಿಯೇ ಆಗಿದೆ.
ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾದ ಎಂ.ಬಿ.ಚನ್ನವೀರಪ್ಪ ಅವರು ಡಿಸಿಸಿ ಬ್ಯಾಂಕ್’ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾರಿ ಬಿರುಸಿನ ಪೈಪೋಟಿ ಏರ್ಪಟ್ಟು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿತ್ತು. ಅಧ್ಯಕ್ಷ ಸ್ಥಾನದ ರೇಸ್’ನಲ್ಲಿ ಎಚ್.ಎಲ್.ಷಡಾಕ್ಷರಪ್ಪ ಮತ್ತು ಜೆ.ಪಿ.ಯೋಗೇಶ್ ಇದ್ದರು. ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ರಾಜಕೀಯ ಬೆಳವಣಿಗೆಯೊಂದರಲ್ಲಿ ಷಡಾಕ್ಷರಪ್ಪ ನಾಮಪತ್ರ ಹಿಂಪಡೆದರೆ ಯೋಗೇಶ್ ಮತದಾನದ ವೇಳೆ ಪ್ರತಿಸ್ಪರ್ಧಿಗೆ ತಮ್ಮ ಮತವನ್ನೂ ನೀಡಿದರು. ಎಲ್ಲ 14 ಮತಗಳನ್ನು ಚನ್ನವೀರಪ್ಪ ಅವರ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ, ಚನ್ನವೀರಪ್ಪ ಅವರು ಈಗಾಗಲೇ ಉಪಾಧ್ಯಕ್ಷರಾಗಿದ್ದು, ಅವರ ಆಯ್ಕೆಯಿಂದ ಈ ಸ್ಥಾನ ತೆರವುಗೊಳ್ಳಲಿದೆ.