ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಉಡ ತಿಂದು ಜಮೀನಿನ ಬೇಲಿಯಲ್ಲಿ ಸಿಲುಕಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಶನಿವಾರ ರಕ್ಷಿಸಲಾಗಿದೆ.
ರಿಪ್ಪನ್ಪೇಟೆಯ ಮಳವಳ್ಳಿ ಬಳಿಯ ಜಮೀನಿನ ಬೇಲಿಗೆ ಸಿಲುಕಿದ್ದ ಕಾಳಿಂಗವನ್ನು ಅತ್ಯಂತ ನಾಜುಕಿನಿಂದ ರಕ್ಷಿಸಲಾಗಿದೆ.
ಉರಗ ಸಂರಕ್ಷಕ ಬೆಳ್ಳೂರು ನಾಗರಾಜ್ ಅವರು ಸ್ಥಳಕ್ಕೆ ಬಂದು ಸರ್ಪ ಸಂರಕ್ಷಿಸಿದ್ದಾರೆ. ಮೂಗುಡ್ತಿ ವನ್ಯಜೀವಿ ವಲಯದ ಫಾರೆಸ್ಟರ್ ಜದಾಫ್, ಗಾರ್ಡ್ ಕುಮಾರ್ ಎದುರುಗಡೆಯೇ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಡಲಾಯಿತು.