ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತರು ಹೊರಡಿಸಿರುವ ಸಾರ್ವಜನಿಕ ಪ್ರಕಟಣೆ ಅನ್ವಯ ಸಂಜೆ 8 ರಾತ್ರಿ 10ರ ವರೆಗೆ ಪಟಾಕಿಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ರಾತ್ರಿ 12 ಗಂಟೆಯಾದರೂ ಬಡಾವಣೆಗಳಲ್ಲಿ ಪಟಾಕಿಗಳ ಸದ್ದು ಜೋರಾಗಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಡ ರಾತ್ರಿವರೆಗೆ ಪಟಾಕಿ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ ಈ ನಿಟ್ಟಿಯಲ್ಲಿ ಸೂಕ್ತ ಕ್ರಮ ವಹಿಸಲಾಗುತ್ತಿಲ್ಲ. ಪಾಲಿಕೆ ಆಯುಕ್ತರ ಸೂಚನೆ ಕೇವಲ ಪತ್ರಕ್ಕಷ್ಟೆ ಸೀಮಿತವಾಗಿ ಉಳಿದಿದೆ.
ವಾರ್ಡ್ ಹೆಲ್ತ್ ಇನ್’ಸ್ಪೆಕ್ಟರ್’ಗಳು ಇದನ್ನು ನಿಗ್ರಹಿಸಬೇಕು. ಯಾವುದೇ ವಾರ್ಡ್’ಗಳಲ್ಲಿ ಪಾಲಿಕೆ ಆಯುಕ್ತರ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲ. ತಡರಾತ್ರಿಯವರೆಗೆ ಪಟಾಕಿ ಬಳಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕನಿಷ್ಠ ನಿಗಿದಿತ ಸಮಯದ ಬಳಿಕ ನಿಯಮ ಉಲ್ಲಂಘಿಸಿದವರ ವಿರುದ್ಧವೂ ಯಾವುದೇ ಕ್ರಮಕೋಳ್ಳುವಲ್ಲಿ ಪಾಲಿಕೆ ವಿಫಲವಾಗಿದೆ.
ಇದಕ್ಕಾಗಿ ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆ ಒಟ್ಟುಗೂಡಿ ದೀಪಾವಳಿ ಮುನ್ನವೇ ತಂಡ ರಚಿಸಬಹುದಿತ್ತು. ಆದರೆ, ಸೂಚನೆ ಕೇವಲ ಪತ್ರದಲ್ಲೇ ಉಳಿದಿದೆ.