ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ತಾಲೂಕಿನಲ್ಲಿ ಎಂ.ಆರ್.ಪಿ.ಗಿಂತ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದರೆನ್ನಲಾದ ಮದ್ಯದಂಗಡಿಗಳ ಮೇಲೆ ಶಿವಮೊಗ್ಗದ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ದಿಢೀರ್ ದಾಳಿ ಮಾಡಿದರು.
ಜನರು ದೂರವಾಣಿ ಮೂಲಕ ನೀಡಿದ್ದ ದೂರುಗಳನ್ವಯ ತೀರ್ಥಹಳ್ಳಿಯ ನಾನಾ ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.