ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ನಾಲ್ವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ. ಶುಕ್ರವಾರ ಪದಕಕ್ಕೆ ಕೊರಳೊಡ್ಡಿ ಮಲೆನಾಡಿನ ಕೀರ್ತಿಯನ್ನು ಇವರು ಇನ್ನಷ್ಟು ಉತ್ತುಂಗಕ್ಕೆ ಒಯ್ದಿದ್ದಾರೆ.
ಯಾರಿಗೆ ಲಭಿಸಿತು: ಹೆಚ್ಚುವರಿ ಎಸ್.ಪಿ. ಡಾ.ಎಚ್.ಟಿ. ಶೇಖರ್, ಸಿಇಎನ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಕೆ.ಟಿ.ಗುರುರಾಜ್, ದೊಡ್ಡಪೇಟೆ ಪೊಲೀಸ್ ಠಾಣೆ ಎಎಸ್ಐ ಅಂಥೋನಿ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಎಚ್ಸಿ ಇಂದ್ರೇಶ್ ಇವರಿಗೆ ಪದಕ ಲಭಿಸಿದೆ. 2017 ಹಾಗೂ 2018ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕ ಲಭಿಸಿದೆ. ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾAತರಾಜು ಅಭಿನಂದಿಸಿದ್ದಾರೆ.