ಸುದ್ದಿ ಕಣಜ.ಕಾಂ
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮತ್ತು ಎಲ್ಲ ಎಸ್ಕಾಂಗಳಲ್ಲಿ 1,559 ಹುದ್ದೆಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಿ ಶನಿವಾರ ಅಧಿಸೂಚನೆ ಹೊರಡಿಸಲಾಗಿದೆ.
2019ರ ಫೆಬ್ರವರಿ 25 ಮತ್ತು ಮಾರ್ಚ್ 11ರ ತಿದ್ದೊಲೆ ಅನ್ವಯ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2020ರ ಸೆಪ್ಟೆಂಬರ್ 9ರಂದು ನಡೆದ ನಿಗಮದ ನಿರ್ದೇಶಕರುಗಳ 121ನೇ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯದನ್ವಯ ನೇಮಕಾತಿ ಆದೇಶವನ್ನು ರದ್ದುಪಡಿಸಲಾಗಿದೆ.
ಸಹಾಯಕ ಎಂಜಿನಿಯರ್ (ವಿದ್ಯುತ್) 505 ಹುದ್ದೆಗಳು, ಸಹಾಯಕ ಎಂಜಿನಿಯರ್ (ಸಿವಿಲ್) 28, ಕಿರಿಯ ಎಂಜಿನಿಯರ್ (ವಿ) 570, ಕಿರಿಯ ಎಂಜಿನಿಯರ್ (ಸಿ) 29, ಕಿರಿಯ ಆಪ್ತ ಸಹಾಯಕ 67 ಮತ್ತು ಕಿರಿಯ ಸಹಾಯಕ 360 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿತ್ತು. ಆದರೀಗ, ದಿಢೀರ್ ಆಗಿ ಸರ್ಕಾರ ಆದೇಶ ಹಿಂಪಡೆಯುವ ಮೂಲಕ ಉದ್ಯೋಗದ ಆಕಾಂಕ್ಷೆಯಲ್ಲಿದ್ದ ಅಭ್ಯರ್ಥಿಗಳ ಕನಸಿನ ಮೇಲೆ ನೀರು ಎರೆದಿದೆ. ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಗೆ ಹಣ ಮರು ಪಾವತಿಸುವ ಅಥವಾ ಇನ್ನಾö್ಯವುದೇ ಮಾಹಿತಿಗಳನ್ನು ಅಧಿಸೂಚನೆಯನ್ನು ನೀಡಲಾಗಿಲ್ಲ.
ಯಾವ ಎಸ್ಕಾಂನಲ್ಲಿ ಎಷ್ಟು: ಕೆಪಿಟಿಸಿಎಲ್ 434, ಬೆಸ್ಕಾಂ 479, ಸೆಸ್ಕ್ 170, ಹೆಸ್ಕಾಂ 232, ಮೆಸ್ಕಾಂ 20, ಜೆಸ್ಕಾಂ 224 ಸೇರಿ ಒಟ್ಟು 1,559 ಹುದ್ದೆಗಳ ನೇಮಕಾತಿಗೆ ಆದೇಶಿಸಲಾಗಿತ್ತು.