ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾ ಜಲಾಶಯದ ಪೂರ್ತಿ ಮಾಹಿತಿಗಾಗಿ ಸಹಾಯವಾಣಿಯನ್ನು ಬುಧವಾರದಿಂದ ಆರಂಭಿಸಲಾಗಿದೆ. ಕಚೇರಿ ಅವಧಿಯಲ್ಲಿ ಮಾಹಿತಿ ಪಡೆಯಬಹುದು. ಸಹಾಯವಾಣಿ
ಸೇವೆಯನ್ನು ನವೆಂಬರ್ 26ರಿಂದ ಆರಂಭಿಸಲಾಗಿದೆ.
ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಬೇಸಿಗೆ, ಮುಂಗಾರು ಹಂಗಾಮಿನ ಬೆಳೆಗಳ ಜೊತೆಗೆ ಅನೇಕ ನಗರ, ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕಾರ್ಖಾನೆಗಳಿಗೆ ಒದಗಿಸಲಾಗುತ್ತಿದೆ.
ಯಾವ ಮಾಹಿತಿ ಲಭ್ಯ: ಜಲಾಶಯದ ನೀರಿನ ಸದುಪಯೋಗವನ್ನು ಪಡೆಯುತ್ತಿರುವ ಎಲ್ಲ ಸಾರ್ವಜನಿಕರಿಗೆ ಮತ್ತು ಅಚ್ಚುಕಟ್ಟು ರೈತರಿಗೆ ಅನುಕೂಲ ಆಗುವಂತೆ ಜಲಾಶಯದ ನೀರಿನ ಮಟ್ಟ, ಪ್ರವಾಹದಿಂದಾಗುವ ನೀರಿನ ಮಟ್ಟ, ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಕಾಲುವೆಗಳ ಸುಸ್ಥಿತಿ, ದುಸ್ಥಿತಿಯ ಬಗ್ಗೆ ಹಾಗೂ ನಾಲೆಗಳಲ್ಲಿ ನೀರನ್ನು ಹರಿಸುವ ನಿಲ್ಲಿಸುವ ಇತ್ಯಾದಿ
ಮಾಹಿತಿಗಳನ್ನು ದೂರವಾಣಿ ಕರೆ ಮೂಲಕ ಪಡೆಯಬಹುದು. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ಬಿ.ಆರ್.ಪ್ರಾಜೆಕ್ಟ್ ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರರ ಕಚೇರಿ (ಸಹಾಯವಾಣಿ ಸಂಖ್ಯೆ:08282-256338)