ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕದ ಸಿಂಗಂ ಖ್ಯಾತಿಯ ರವಿ ಚೆನ್ನಣ್ಣನವರ್ ಅವರು ನವೆಂಬರ್ 28ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರದಲ್ಲಿ `ಭರವಸೆಯೇ ಬದುಕಿನ ಬೆಳಕು’ ವಿಷಯ ಬಗ್ಗೆ ಅವರು ಮಾತನಾಡಲಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಸಮನ್ವಯ ಟ್ರಸ್ಟ್ ಮತ್ತು ಬೆಂಗಳೂರಿನ ಆರ್.ಡಿ.ಸಿ. ಫೌಂಡೇಷನ್ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. `ದೌರ್ಬಲ್ಯಗಳೇ ನನ್ನ ಸಾಮರ್ಥ್ಯ’ ವಿಷಯ ಬಗ್ಗೆ ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ್ ಉಪನ್ಯಾಸ ನೀಡುವರು.
`ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಗಳು ಮತ್ತು ತಯಾರಿ’, `ಪರೀಕ್ಷೆ ಪತ್ರಿಕೆ ಮಾದರಿ, ಹಂತಗಳು’ ಕುರಿತು ಶಿಕ್ಷಣ ತಜ್ಞ ಸಂದೀಪ್ ಮಹಾಜನ್, `ನೆನಪಿನ ಶಕ್ತಿಯ ಮಂತ್ರಗಳು’ ಕುರಿತು ಡಾ. ಪ್ರೀತಿ ಪೈ, `ಸಂವಹನ- ಸಾಧನೆಯ ಅಸ್ತ್ರ’ ಬಗ್ಗೆ ಡಾ. ಕಾರ್ತಿಕ್ ಉಪನ್ಯಾಸ ನೀಡಲಿದ್ದಾರೆ.
ಪಾಸ್ ಇಲ್ಲದಿದ್ದರೆ ಪ್ರವೇಶವಿಲ್ಲ: ನ.28ರಂದು ಬೆಳಗ್ಗೆ 10ಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಪ್ರವೇಶಕ್ಕೆ ಪಾಸ್ ಕಡ್ಡಾಯ ಇದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸುವರು.
ಶಿವಮೊಗ್ಗದಲ್ಲಿ ಮೊದಲ ಬಾರಿ ಕನ್ನಡ ಗಜ್ಹಲ್: ಸಂಜೆ 6.30ಕ್ಕೆ ಇಮ್ತಿಯಾಜ್ ಸುಲ್ತಾನ್ ಕೋಣಂದೂರು ಅವರು ಕನ್ನಡ ಗಜ್ಹಲ್ಗಳ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 300 ಆಸಕ್ತರಿಗೆ ಮಾತ್ರ ಪ್ರವೇಶ ಇದೆ. ಪಾಸ್ಗಳಿಗಾಗಿ ಟಿ.ಎಸ್.ಬಿ.ವೃತ್ತದಲ್ಲಿರುವ ಶ್ರೀನಿಧಿ ಸಿಲ್ಕ್ಸ್ ಮತ್ತು ಟೆಕ್ಸ್ಟೈಲ್ಸ್ ಗೆ ಸಂಪರ್ಕಿಸಬಹುದು.