ಕೋವಿಡ್ ರಿಪೋರ್ಟ್: ಒಂದು ಬಲಿ, ಭದ್ರಾವತಿಯಲ್ಲೇ ಅತಿ ಹೆಚ್ಚು ಕೇಸ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ, ಶುಕ್ರವಾರ ಕೊರೊನಾ ಒಬ್ಬರನ್ನು ಬಲಿ ಪಡೆದಿದ್ದು, ಇದುವರೆಗೆ 348 ಜನ ಸಾವಿಗೀಡಾಗಿದ್ದಾರೆ.
ಹೊಸದಾಗಿ 29 ಜನರಿಗೆ ಸೋಂಕು ತಗಲಿದೆ. 34 ಜನ ಗುಣಮುಖರಾಗಿದ್ದಾರೆ. ಇಂದು 3,660 ಜನರ ಗಂಟಲು ದ್ರವದ ಮಾದರಿ ಪಡೆಯಲಾಗಿದೆ. 3148 ನೆಗೆಟಿವ್ ಬಂದಿವೆ.
ತಾಲೂಕುವಾರು: ಶಿವಮೊಗ್ಗ 8, ಭದ್ರಾವತಿ 14, ಶಿಕಾರಿಪುರ 0, ತೀರ್ಥಹಳ್ಳಿ 1, ಸೊರಬ 3, ಸಾಗರ 2 ಮತ್ತು ಬೇರೆ ಜಿಲ್ಲೆಯ 1 ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 7,159 ಕಂಟೈನ್ಮೆAಟ್ ಜೋನ್‌ಗಳಿದ್ದು, ಅದರಲ್ಲಿ 6500 ಕೈಬಿಡಲಾಗಿದೆ.

Leave a Reply

Your email address will not be published. Required fields are marked *

error: Content is protected !!