ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೆಳೆಯನ್ನು ಹಾಳು ಮಾಡಲು ಬರುವ ಹಂದಿಯನ್ನು ಓಡಿಸುವುದಕ್ಕಾಗಿ ಸಂಗ್ರಹಿಸಿಟ್ಟಿದ್ದ ನಾಡ ಬಾಂಬ್ ಗಳೇ ಈ ವ್ಯಕ್ತಿ ಪಾಲಿಗೆ ಮಾರಕವಾಗಿ ಪರಿಣಿಮಿಸಿವೆ. ಮನೆಯ ಮೇಲೆ ನಾಡ ಬಾಂಬ್’ಗಳನ್ನು ಒಣಗುವುದಕ್ಕಾಗಿ ಬಿಸಿಲಿಗೆ ಹಾಕಿದ್ದ. ಚಾವಣಿಯಿಂದ ಕೆಳಗೆ ಉರುಳಿದ ಕಾರಣ ಬಾಂಬ್ ಸ್ಫೋಟಗೊಂಡಿದೆ.
* ಐವರಿಗೆ ಗಾಯ: ತಾಲೂಕಿನ ಕುಂಚೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ನಾಡ ಬಾಂಬ್ ಸಂಗ್ರಹಿಸಿಟ್ಟಿದ್ದ ತಮಿಳ್ ಕುಮಾರ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.