ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿರುವ ಎಲ್ಲ ಪೆಟ್ರೋಲ್ ಬಂಕ್ ಗಳು ಶುಕ್ರವಾರ ಬಂದ್ ಆಗಿದ್ದವು. ಇದರಿಂದಾಗಿ, ಪೆಟ್ರೋಲ್ ಸಿಗದೇ ಹಲವರು ಪರದಾಡಿದರು. ಹಲವರು ನಗರದ ಹೊರ ವಲಯದಲ್ಲಿರುವ ಪೆಟ್ರೋಲ್ ಬಂಕ್ ಗಳಿಗೆ ತೆರಳಿ ಪೆಟ್ರೋಲ್ ಹಾಕಿಸಿಕೊಂಡರು.
ಪೆಟ್ರೋಲ್ ಅತ್ಯಗತ್ಯ ವಸ್ತುಗಳ ಪಟ್ಟಿಯಲ್ಲಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಂದ್ ಮಾಡುವಂತೆ ಬಂಕ್ ಗಳಿಗೆ ನಿರ್ದೇಶನ ನೀಡಿಲ್ಲ. ಬೆಳಗ್ಗೆ ನಗರದ ಹಲವು ಪೆಟ್ರೋಲ್ ಬಂಕ್ ಗಳನ್ನು ತೆರೆಯಲಾಗಿತ್ತು. ಆದರೆ, ಪೊಲೀಸರು ಬಂದು ನಂತರ ಅವುಗಳನ್ನು ಬಂದ್ ಮಾಡಿಸಿರುವುದಾಗಿ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಸುದ್ದಿ ಕಣಜಕ್ಕೆ ತಿಳಿಸಿದ್ದಾರೆ.
ಯಾವುದೇ ಪೂರ್ವ ಮಾಹಿತಿ ಇಲ್ಲದೇ ಏಕಾಏಕಿ ಪೆಟ್ರೋಲ್ ಮಾರಾಟ ಮಾಡದಂತೆ ನಿರ್ಬಂಧ ಹೇರಿದ್ದಕ್ಕೆ ದೂರದ ಪ್ರದೇಶಗಳಿಂದ ಶಿವಮೊಗ್ಗಕ್ಕೆ ನಗರಕ್ಕೆ ಬಂದವರು ಕಷ್ಟಪಟ್ಟರು.
ಮೊದಲೇ ವ್ಯಾಪಾರವಿಲ್ಲದೇ ಕಷ್ಟಪಡುತ್ತಿದ್ದೇವೆ. ಹೀಗಿರುವಾಗ, ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೇ ಪೆಟ್ರೋಲ್ ಬಂಕ್ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಇದರಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಇಬ್ಬರಿಗೂ ತೊಂದರೆಯಾಗಿದೆ.
– ನೊಂದ ಪೆಟ್ರೋಲ್ ಬಂಕ್ ಮಾಲೀಕರು