ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದರಿಂದ ಮುಷ್ಕರವನ್ನು ಹಿಂಪಡೆಯಲಾಗಿದೆ. ಸಂಜೆ ಬಳಿಕ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ದೌಡಾಯಿಸಿದ್ದರಿಂದ ಭಾರಿ ಜನಸಂದಣಿ ಏರ್ಪಟ್ಟಿತ್ತು. ಆದರೆ, ಸಂಜೆಯಾಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ನೌಕರರು ಕರ್ತವ್ಯಕ್ಕೆ ಬಂದಿರಲಿಲ್ಲ. ಹೀಗಾಗಿ, ಸ್ವಲ್ಪ ಸಮಸ್ಯೆಯಾಯಿತು.
ಮೇಲಾಧಿಕಾರಿಗಳ ಒತ್ತಡಕ್ಕೆ ಕರ್ತವ್ಯ ನಿರ್ವಹಣೆ. ನೌಕರರು, ಪ್ರಯಾಣಿಕರ ಮಧ್ಯೆ ವಾಗ್ವಾದ
ಇದನ್ನು ಮನಗಂಡು ಲಭ್ಯ ಮಾನವ ಸಂಪನ್ಮೂಲದ ಆಧಾರದ ಮೇಲೆ ಬೇಡಿಕೆ ಇರುವ ಮಾರ್ಗದ ಕಡೆಗೆ ಬಸ್ ಸಂಚರಿಸಲು ಅನುವು ಮಾಡಿಕೊಟ್ಟರು. ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ಒಟ್ಟು 164ರಲ್ಲಿ ಕೇವಲ 70 ಬಸ್ ಸಂಚರಿಸಿವೆ. ಅಂದಾಜು 2500 ರಿಂದ 3000 ಜನ ವಿವಿಧೆಡೆ ಪ್ರಯಾಣಿಸಿದರು.
ಯಾವ ಮಾರ್ಗಕ್ಕೆ ಎಷ್ಟು ಬಸ್: ಶಿವಮೊಗ್ಗದಿಂದ ಬೆಂಗಳೂರು 15, ಚಿಕ್ಕಮಗಳೂರು 2, ಹರಿಹರ 4, ಭದ್ರಾವತಿ 8, ಮಣಿಪಾಲ್ 4, ಮೈಸೂರು 4, ಕಲಬುರಗಿ 1, ರಾಯಚೂರು 1, ಕೊಲ್ಲಾಪುರ 1, ತಿರುವಣ್ಣಮಲೈ 2, ಕೊಯಮತ್ತೂರು 2 ಬಸ್ ಸಂಚರಿಸಿದವು.
Video Report | click here