ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಜರಂಗ ದಳದ ಸಹ ಸಂಚಾಲಕ ನಾಗೇಶ್ ಮೇಲೆ ಹಲ್ಲೆ ಬಳಿಕ ನಗರದಲ್ಲಿ ನಡೆದ ಕೋಮು ಗಲಭೆಯಿಂದಾಗಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಡಿಸೆಂಬರ್ 7ರವರೆಗೆ ಮುಂದುವರಿಸಿ ತಹಸೀಲ್ದಾರ್ ಎನ್.ಜೆ.ನಾಗರಾಜ್ ಅವರು ಶನಿವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕೋಮುಗಳ ನಡುವೆ ಸಂಭವಿಸಿದ್ದ ಜಗಳದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಯೂ ಹಾನಿಯಾಗಿತ್ತು. ಹೀಗಾಗಿ, ಡಿ.3ರಂದು ಮಧ್ಯಾಹ್ನ 3ರಿಂದ ಶನಿವಾರದವರೆಗೆ ತಹಸೀಲ್ದಾರ್ ಅವರು ನಿಷೇಧಾಜ್ಞೆ ಹೇರಿದ್ದರು. ಅದನ್ನು ಮುಂದುವರಿಸಲಾಗಿದೆ.
ಗಲಭೆ ಕುರಿತ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ⇓
⊗ ಗಲಭೆ ಪ್ರಕರಣ ಏನಾಯ್ತು, ಇಂದಿನ ಪೂರ್ಣ ಮಾಹಿತಿ
⊗ 10 ದಿನಗಳವರೆಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ