ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾರಿಗೆ ನೌಕರರ ಮುಷ್ಕರ ಸುಖಾಂತ್ಯ ಕಂಡ ಮೊದಲ ದಿನವಾದ ಮಂಗಳವಾರ ಶಿವಮೊಗ್ಗ ವಿಭಾಗದಿಂದ ಬಸ್ ಸಂಚಾರ ಸುಗಮವಾಗಿತ್ತು.
ಬೆಳಗ್ಗೆಯಿಂದ ಸಂಜೆಯವರೆಗೆ ಒಟ್ಟು 164 ಬಸ್ ಸಂಚರಿಸಿದ್ದು, 4500ರಿಂದ 5000 ಜನ ಪ್ರಯಾಣಿಸಿದ್ದಾರೆ. ವಿವಿಧೆಡೆ ಪ್ರಯಾಣಿಸಬೇಕಾದ ಜನರು ಬಸ್ ಮುಷ್ಕರದಿಂದಾಗಿ ಎಲ್ಲಿಯೂ ಹೋಗಲು ಸಾಧ್ಯವಾಗಿರಲಿಲ್ಲ. ಸಾರಿಗೆ ಸೇವೆ ಆರಂಭಿಸಿದ್ದೇ ಜನರು ಬಸ್ ನಿಲ್ದಾಣಗಳತ್ತ ಧಾವಿಸಿದ್ದಾರೆ. ಬೆಂಗಳೂರು, ದಾವಣಗೆರೆ, ಹರಿಹರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಬಸ್ ಸಂಚಾರ ಮಾಡಿದವು.
ಓಲ್ವೋ, ಎಸಿ, ನಾನ್ ಎಸಿ ಎಲ್ಲ ಬಸ್ಗಳ ಸಂಚಾರ ಕೂಡ ಆರಂಭಿಸಲಾಗಿದೆ.
ವಿಡಿಯೋ ರಿಪೋರ್ಟ್ ⇓