ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಹಾಗೂ ಮರಾಠಕ್ಕೆ ಪ್ರತ್ಯೇಕ ನಿಗಮ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ನಾನಾ ಸಮುದಾಯಗಳು ತಮ್ಮ ಸಮುದಾಯದಕ್ಕೂ ಪ್ರತ್ಯೇಕ ನಿಗಮ ಕೊಡುವಂತೆ ಕೋರುತ್ತಿವೆ.
- ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ, ಕನಿಷ್ಠ 500 ಕೋಟಿ ರೂ. ಕೂಡಲೇ ಮಂಜೂರು ಮಾಡಬೇಕು
- ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ನೇಮಿಸಲಾಗಿರುವ ಮೇಲ್ವಿಚಾರಣೆ ಮತ್ತು ಸಲಹ ಸಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು
- ಸಮಿತಿ ರದ್ದುಪಡಿಸಿ ಧರ್ಮದರ್ಶಿ ರಾಮಪ್ಪ ಅವರ ಕುಟುಂಬದ ನೇತೃತ್ವದಲ್ಲಿ ದೇವಸ್ಥಾನವನ್ನು ಯಥಾಸ್ಥಿತಿ ಮುಂದುವರಿಸಬೇಕು
- ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯ ಅವರ ನಾಮಕರಣ ಮಾಡಬೇಕು
ಗುರುವಾರ ಬೆಳಗ್ಗೆ ನಗರದ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ರಾಜ್ಯ ಸರ್ಕಾರಕ್ಕೆ ಪ್ರತ್ಯೇಕ ನಿಗಮಕ್ಕಾಗಿ ಮನವಿ ಪತ್ರ ಸಲ್ಲಿಸಿತು.
ಶಿವಮೊಗ್ಗದಿಂದ ಸಂಚರಿಸಲಿವೆ Festival express ರೈಲು, ಯಾವಾಗಿಂದ ಸೇವೆ ಲಭ್ಯ, ಯಾವ ರೈಲು? ಇಲ್ಲಿದೆ ಮಾಹಿತಿ
ಈಡಿಗ, ಬಿಲ್ಲವ ಮತ್ತು ನಾಮಧಾರಿ ಸಮಾಜದ 26 ಉಪ ಪಂಗಡ ಒಳಗೊಂಡಿರುವ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಅಭಿವೃದ್ಧಿ ನಿಗಮದ ಅಗತ್ಯವಿದೆ ಎಂದು ಮನವಿ ಪತ್ರದಲ್ಲಿ ಸಂಘ ತಿಳಿಸಿದೆ.
ಶಿರಾಳಕೊಪ್ಪದಲ್ಲಿ ಅರಳಿದ `ಅಚ್ಚರಿ’ ಪ್ರತಿಭೆ, ಮೈ ಜುಮ್ ಎನಿಸುತ್ತೆ ಈ ಶಾರ್ಟ್ ಮೂವಿ
ಈಡಿಗ ಸಮುದಾಯ ರಾಜ್ಯದಲ್ಲಿ ಅಂದಾಜು 1 ಕೋಟಿ ಜನಸಂಖ್ಯೆ ಹೊಂದಿದೆ. ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿಯೂ ಹಿಂದೆ ಉಳಿದಿದ್ದಾರೆ. ಹೀಗಾಗಿ, ಕೂಡಲೇ ನಿಗಮ ಸ್ಥಾಪಿಸಿ 500 ಕೋಟಿ ರೂಪಾಯಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದೆ.
ಈ ವರ್ಷದ ಕೊನೆಯ ಬೃಹತ್ ಲೋಕ ಅದಾಲತ್, ಈ ಸಲ ಗುರಿಯೆಷ್ಟು, ಕಳೆದ ಬಾರಿ ವಿಲೇ ಆಗಿದ್ದೆಷ್ಟು?
ಪ್ರತಿಭಟನೆಯಲ್ಲಿ ಸಂಘದ ಸುಧಾಕರ್ ಶೆಟ್ಟಿಹಳ್ಳಿ, ಪ್ರವೀಣ್ ಹಿರೇಇಡಗೋಡು, ಸತ್ಯ ನಾರಾಯಣ, ಪುನೀತ್ ಹೆಬ್ಬೂರ್, ರವಿ ಕುಮಾರ್ ಪುರದಾಳು, ಎನ್.ಹರೀಶ್, ಶಶಿಕುಮಾರ್, ವಿನೋದ್ ಕುಮಾರ್, ಮಣಕದ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.