ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾನಸಿಕ ಅಸ್ವಸ್ಥ ಕೈದಿಯೊಬ್ಬನು ಚಮಚವನ್ನೇ ಆಯುಧ ರೂಪದಲ್ಲಿ ಮೊನಚಾಗಿ ಮಾಡಿ ಅದರಿಂದ ಮೂವರು ಸಜಾಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾನೆ.
ಸಂತ್ರಸ್ತ ಕುಟುಂಬ ಹಸನಾಯ್ತು, ಇದು ರಾಜ್ಯದಲ್ಲೇ ವಿಶಿಷ್ಟ ಪ್ರಕರಣ
ಭಾನುವಾರ ಸಂಜೆ ಕೇಂದ್ರ ಕಾರಾಗೃಹ ಆವರಣದಲ್ಲಿ ಘಟನೆ ನಡೆದಿದೆ. ಕೊಲೆ ಪ್ರಕರಣದ ಆರೋಪಿ ಮೂಲತಃ ಉಡುಪಿಯ ಪ್ರಶಾಂತ್ (30) ಎಂಬಾತನೇ ಹಲ್ಲೆ ಮಾಡಿರುವ ವ್ಯಕ್ತಿ. ಈತ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಹಲವು ಸಲ ಜೈಲಿನಲ್ಲಿ ತನ್ನ ಮೇಲೆ ತಾನೇ ಚಮಚದಿಂದ ಚುಚ್ಚಿಕೊಂಡು ಗೋಡೆಗೆ ಜಜ್ಜಿಕೊಂಡು ಗಾಯಗೊಳಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡವರು: ಮಲ್ಲೇಶಪ್ಪ, ದೇವೇಂದ್ರಪ್ಪ ಮತ್ತು ಬೆನಕಶೆಟ್ಟಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದು, ಅವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೋಸ್ಕರ ದಾಖಲಿಸಲಾಗಿದೆ.