ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಪಟ್ಟಣದಲ್ಲಿ ಶುಕ್ರವಾರ ನಾಯಿಯೊಂದು ಜನ, ಜಾನುವಾರು ಲೆಕ್ಕಿಸದೇ 15 ಜನರನ್ನು ಕಚ್ಚಿದೆ. ಇದರಿಂದ ಭೀತಿ ಸೃಷ್ಟಿಯಾಗಿದೆ.
ಪಾರ್ಕಿಂಗ್ಗಾಗಿ ಕಿರಿಕ್, ಮೂಗೇ ಕಟ್
ಕೆಲವು ಗಾಯಾಳುಗಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಇನ್ನುಳಿದವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೂ ಕರೆದುಕೊಂಡು ಬರಲಾಗಿದೆ.
ಬೀದಿ ನಾಯಿಗೆ ಹುಚ್ಚು ಹಿಡಿದು ಕಂಡ ಕಂಡವರನ್ನು ಕಚ್ಚುತ್ತಿರುವುದಾಗಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಟ್ಟಿಹಳ್ಳಿ ಲೋಕೇಶ್, ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಅವರಿಗೆ ಮಾಹಿತಿ ನೀಡಿದ ನಂತರ ಪಪಂ ನೌಕರರು ನಾಯಿಯನ್ನು ವಶಕ್ಕೆ ಪಡೆದಿದ್ದಾರೆ.