ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಾರು ಪಾರ್ಕಿಂಗ್ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಟೆಕ್ಕಿಯೊಬ್ಬ ಮೂಗನ್ನೇ ಕಚ್ಚಿ ಕತ್ತರಿಸಿದ ಘಟನೆ ಸಂಭವಿಸಿದೆ.
ನಿಂತಿದ್ದ ಲಾರಿಗೆ ಬೆಂಕಿ, ಅದೃಷ್ಟವಷಾತ್ ಪಾರಾದ ಚಾಲಕ
ವಿನೋಬನಗರದ ಪ್ರಿಯದರ್ಶಿನಿ ಶಾಲೆ ಸಮೀಪ ಕಾರು ಪಾರ್ಕಿಂಗ್ಗಾಗಿ ಗಲಾಟೆ ನಡೆದಿದೆ. ಟೆಕ್ಕಿ ಸಂತೋಷ್ ಎಂಬಾತ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಮಗ ಆಕಾಶ್ ಎಂಬಾತನ ಮೂಗಿನ ತುದಿಯನ್ನೇ ತುಂಡರಿಸಿದ್ದಾನೆ.
ವಾಂಟೆಂಡ್ ಕಳ್ಳ ಅರೆಸ್ಟ್, ಕೆಜಿಗಟ್ಟಲೇ ಬೆಳ್ಳಿ ಜಪ್ತಿ
ಕಾರ್ಪೋರೇಟರ್ ಮತ್ತು ಪಕ್ಕದ ಮನೆಯ ನಿವೃತ್ತ ಎಎಸ್ಐ ಕುಟುಂಬದ ನಡುವೆ ಪಾರ್ಕಿಂಗ್ಗಾಗಿ ಪದೇ ಪದೆ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಶುಕ್ರವಾರ ಸಹ ಇದೇ ವಿಚಾರ ತಾರಕಕ್ಕೇರಿದೆ. ರೊಚ್ಚಿಗೆದ್ದ ಸಂತೋಷ್ ಎಂಬಾತ ಆಕಾಶನ ಮೂಗನ್ನು ಬಾಯಿಂದ ಕಡಿದು ಕತ್ತರಿಸಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.