ಸುದ್ದಿ ಕಣಜ.ಕಾಂ
ಶಿವಮೊಗ್ಗ: ಐವತ್ತು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇದೇ ಮೊದಲ ಸಲ 9 ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ರಾಜ್ಯ ಸಂಘಕ್ಕೆ ಅವಿರೋಧ ಆಯ್ಕೆಯಾಗಲು ಸಿ.ಎಸ್. ಷಡಕ್ಷರಿ ಕಾರಣರಾಗಿದ್ದಾರೆ. ಸರ್ಕಾರಿ ನೌಕರರ ಸಂಘ ಸುಪ್ರೀಂ ಆಗಿದ್ದು, ಅದರ ಅಡಿಯಲ್ಲಿ ಎಲ್ಲರೂ ಒಗ್ಗೂಡಿ ಶಿಕ್ಷಕರ ಬೇಡಿಕೆಗಳಿಗಾಗಿ ಏಕತೆಯಿಂದ ಹೋರಾಟ ಮಾಡಲಾಗುವುದು. ಶಾಲೆಗಳ ಆರಂಭಕ್ಕೆ ನಮ್ಮ ಒಪ್ಪಿಗೆ ಇದೆ. ಈಗಲೂ ಸಹ ಶಿಕ್ಷಕರು ನಿತ್ಯ ಶಾಲೆಗೆ ಹೋಗುತ್ತಿದ್ದಾರೆ. ಶಾಲೆಗಳಲ್ಲೇ ವಿಶಾಲವಾದ ಕೊಠಡಿ, ಆವರಣ ಇರುವುದರಿಂದ ವಿದ್ಯಾಗಮ ತರಗತಿಗಳು ಅಲ್ಲಿಯೇ ನಡೆಸುವುದರಿಂದ ಅನುಕೂಲವಾಗುತ್ತದೆ.
– ಶಂಭು ಲಿಂಗೇಗೌಡ ಹಲಗೇರಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ
ರಾಜ್ಯದಲ್ಲಿ 1.60 ಲಕ್ಷ ಶಿಕ್ಷಕರು: ರಾಜ್ಯದಲ್ಲಿ 1.60 ಲಕ್ಷ ಪ್ರಾಥಮಿಕ ಶಾಲೆ ಶಿಕ್ಷಕರು ಇದ್ದಾರೆ. ಇವರನ್ನೆಲ್ಲ ಒಗ್ಗೂಡಿಸಿ ಸರ್ಕಾರಿ ನೌಕರರ ಸಂಘದೊಂದಿಗೆ ಜೊತೆಗೂಡಿ ಸಂಘ ಸದೃಢಗೊಳಿಸಲಾಗುವುದು ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಸುಮತಿ, ಡಿ.ಬಿ. ರುದ್ರಪ್ಪ, ರವಿ, ಶಾಂತರಾಜ್, ಮೋಹನ್ ಕುಮಾರ್, ದಿನೇಶ್, ಪ್ರಸಾದ್ ಬಾಬು, ಶರಣಪ್ಪ ಗೌಡ ಉಪಸ್ಥಿತರಿದ್ದರು.