ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 4 ಕ್ಲಿಷ್ಟಕರ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಹೃದಯ ತಜ್ಞ ಡಾ.ಆರ್.ಬಾಲಸುಬ್ರಮಣಿ ಅವರು ಸರ್ಜರಿಗಳ ಕುರಿತು ತಿಳಿಸಿದರು.
- ಸರ್ಜರಿ ನಂಬರ್ 1- ಅರವತ್ತು ವರ್ಷದ ಮೂಕ ಮತ್ತು ಕಿವುಡ ವ್ಯಕ್ತಿಯೊಬ್ಬರಿಗೆ ತೆರೆದ ಹೃದಯ ಚಿಕಿತ್ಸೆಯನ್ನು ಮಾಡಲಾಗಿದೆ. ಕಿವುಡ ಮತ್ತು ಮೂಗರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದ ಮೊದಲ ಪ್ರಕರಣ 2016ರಲ್ಲಿ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿತ್ತು. ಅಂತಹದ್ದೇ ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ.
- ಸರ್ಜರಿ ನಂಬರ್ 2- 35 ವರ್ಷದ ವ್ಯಕ್ತಿಗೆ 8 ವರ್ಷದಿಂದ ಹೃದಯದಲ್ಲಿ ಗಡ್ಡೆ ಇತ್ತು. ಅಷ್ಟೇ ಅಲ್ಲದೇ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ಇವರಿಗೆ ಕೋವಿಡ್ ಸೋಂಕು ಸಹ ತಗುಲಿತ್ತು. ಇಷ್ಟೊಂದು ಅಪಾಯಗಳ ನಡುವೆಯೂ ಯಶಸ್ವಿಯಾಗಿ ಹೃದಯದ ಗಡ್ಡೆಯನ್ನು ಹೊರ ತೆಗೆಯಲಾಗಿದೆ. ಇದು ವಿಶ್ವದ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ.
- ಸರ್ಜರಿ ನಂಬರ್ 3- 68 ವರ್ಷದ ವ್ಯಕ್ತಿಯೊಬ್ಬರಿಗೆ ಪಾರ್ಕಿನ್ ಸನ್ ಎಂಬ ಕಾಯಿಲೆ ಇತ್ತು. ಇವರಿಗೆ ಬೈಪಾಸ್ ಸರ್ಜರಿ ಭಾರಿ ಕ್ಲಿಷ್ಟಕರವಾಗಿತ್ತು. ಇದನ್ನೂ ಯಶಸ್ವಿಯಾಗಿತ್ತು.
- ಸರ್ಜರಿ ನಂಬರ್ 4- 65 ವರ್ಷದ ವ್ಯಕ್ತಿ ಮೂರು ವರ್ಷದ ಹಿಂದೆ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಅವರ ಹೃದಯದ ಕಾರ್ಯಕ್ಷಮತೆ ಕಡಿಮೆ ಆಗಿತ್ತು. ಬದುಕುವುದೇ ಕಷ್ಟವಾಗಿತ್ತು. ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಗುಣಮುಖರಾಗಿದ್ದಾರೆ.
ಆಸ್ಪತ್ರೆಯಲ್ಲಿ ಕ್ಲಷ್ಟಕರವಾದ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದ್ದು, ನಿತ್ಯ ಒಂದಿಲ್ಲೊಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಡಾ. ಸಂದೀಪ್ ಕೋಠಿ, ಹನುಮಂತಪ್ಪ, ಚಿಕಿತ್ಸೆ ಪಡೆದ ಎಸ್.ರವಿ, ಎಂ.ಚನ್ನಬಸಪ್ಪ, ಕಾಂತಪ್ಪ ಉಪಸ್ಥಿತರಿದ್ದರು.