ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರಿಗೆ ಸೇವೆಯಲ್ಲಿ ಮುಂದುವರಿಸುವಂತೆ ಆದೇಶಿಸಿದೆ. ಈ ಸೂಚನೆ ನೀಡಿ ತಿಂಗಳುಗಳೇ ಕಳೆದರೂ ಕಾಲೇಜು ಶಿಕ್ಷಣ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ.
ಕಳೆದ ತಿಂಗಳು ಇದೇ ದಿನ ಧರ್ಮೇಗೌಡರು ಶಿವಮೊಗ್ಗಕ್ಕೆ ಬಂದಿದ್ದರು
4 ತಿಂಗಳಿಂದ ಉಪನ್ಯಾಸಕರು ಉದ್ಯೋಗ ಮತ್ತು ವೇತನವಿಲ್ಲದೇ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ರಾಜ್ಯ ಸಮನ್ವಯ ಸಮಿತಿ ತಿಳಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಬೇಡಿಕೆಗಳೇನು?
- ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಿ
- 2020ರ ನವೆಂಬರ್ 17ರಿಂದ ಅತಿಥಿ ಉಪನ್ಯಾಸಕರ ಸೇವೆ ಪರಿಗಣಿಸಬೇಕು
- ಸುರಕ್ಷತೆ ದೃಷ್ಟಿಯಿಂದ ಕೋವಿಡ್-19 ಮಾರ್ಗಸೂಚಿಯನ್ವಯ 40:50 ಅನುಪಾತದಲ್ಲಿ ತರಗತಿ ವಿಭಜನೆ ಮಾಡಿ ಸೇವೆಯಲ್ಲಿ ಬಳಸಿಕೊಳ್ಳಬೇಕು
- ಸೇವಾಭದ್ರತೆಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಉದ್ಯೋಗ ಭದ್ರತೆ ಘೋಷಿಸಬೇಕು
ಪ್ರತಿಭಟನೆಯಲ್ಲಿ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ.ಸೋಮಶೇಖರ್ ಶಿಮೊಗ್ಗಿ, ಪ್ರಧಾನ ಕಾರ್ಯದರ್ಶಿ ಡಾ.ಎಂ.ಸಿ. ನರಹರಿ, ಕೆ.ರಾಜೇಶ್ ಕುಮಾರ್, ಸರ್ವಜ್ಞ ಮೂರ್ತಿ, ಡಿಎಸ್ಎಸ್ ಮುಖಂಡ ಹಾಲೇಶಪ್ಪ, ಶಿವು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.