ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಚೇತರಿಕೆ ಹಂತದಲ್ಲಿದ್ದು, ಉದ್ಯೋಗ ಅವಕಾಶಗಳ ಸೃಷ್ಟಿಗೆ ಉತ್ತೇಜನ ನೀಡಲು Atmanirbhar Bharat RojgarYojana (ABRY) ಆರಂಭಿಸಿದೆ.
ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ 3.00ರ ಅಡಿಯಲ್ಲಿ ಯೋಜನೆ ರೂಪಿಸಲಾಗಿದೆ. ಇಪಿಎಫ್ಒ ನೋಂದಾಯಿತ ಸಂಸ್ಥೆಗಳ ಉದ್ಯೋಗದಾತರು ಮತ್ತು ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ABRY ಯೋಜನೆ ಜಾರಿಗೊಳಿಸಲಾಗಿದೆ.
ಪೊಲೀಸ್ ಇಲಾಖೆ ನಡೆಸಲಿದೆ ಪರೀಕ್ಷೆ, ಈ ವೆಬ್ ಸೈನ್ನಲ್ಲಿ ಸಿಗಲಿದೆ ಹಾಲ್ ಟಿಕೆಟ್
2020ರ ಅಕ್ಟೋಬರ್ ರಿಂದ 2021ರ ಜೂನ್ ವರೆಗೆ ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಗಳಿಗೆ ಈ ಯೋಜನೆ ಅನ್ವಯಿಸಲಿದೆ.
ನೌಕರರು ಮತ್ತು ಉದ್ಯೋಗದಾತರ ಭವಿಷ್ಯ ನಿಧಿ ವಂತಿಗೆಯನ್ನು ಪಾವತಿಸುವ ರೂಪದಲ್ಲಿ ಸರ್ಕಾರವು ಸಬ್ಸಿಡಿಯನ್ನು ನೀಡುತ್ತದೆ.
1000 ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಗಳಲ್ಲಿ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವೇತನದ ಶೇ.24 ಮತ್ತು 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಕೇವಲ ನೌಕರರ ಇಪಿಎಫ್ ವಂತಿಗೆಯಾದ ಶೇ.12 ಅನ್ನು ಸರ್ಕಾರ ಭರಿಸಲಿದೆ.
ಆಯಾ ಕಾಲೇಜುಗಳಲ್ಲೇ ಫಾರ್ಮ್ ನಂ.6 ಲಭ್ಯ, ಕಾಲೇಜು ಅಡ್ಮಿಷನ್ ಮಾಹಿತಿ ಆಧರಿಸಿ ಮತದಾರ ಪಟ್ಟಿಗೆ ಸೇರ್ಪಡೆ
ಹೊಸ ಉದ್ಯೋಗಿಗೆ ಸಬ್ಸಿಡಿ ಬೆಂಬಲವು ಅವನ ಇಲ್ಲವೇ ಅವಳ ಉದ್ಯೋಗದ ದಿನಾಂಕದಿಂದ 2 ವರ್ಷಗಳವರೆಗೆ ಇರುತ್ತದೆ.
50 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಕನಿಷ್ಠ 2 ಹೊಸ ಉದ್ಯೋಗಿಗಳನ್ನು ಸೇರಿಸಬೇಕಾಗಿದೆ. 50 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಕನಿಷ್ಠ 5 ಹೊಸ ಉದ್ಯೋಗಿಗಳನ್ನು ಹೊಸದಾಗಿ ಸೇರಿಸಬೇಕಾಗುತ್ತದೆ.
ಈ ಸೇರ್ಪಡೆಗೆ ಸೆಪ್ಟಂಬರ್ 2020ರ ಇಸಿಆರ್ ಮೂಲ ತಿಂಗಳಾಗಿರುತ್ತದೆ. ಸಬ್ಸಿಡಿ ಪಡೆಯಲು ಹಾಗೂ ಅರ್ಹತಾ ಮಾನದಂಡಗಳನ್ನು ಪೂರೈಸಲು 2020ರ ಸೆಪ್ಟೆಂಬರ್ 15 ರಂದು ಅಥವಾ ಅದಕ್ಕೂ ಮೊದಲು ಸೆಪ್ಟಂಬರ್ 2020ರ ಎಲ್ಲ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಇಸಿಆರ್ ಸಲ್ಲಿಸುವುದು ಅವಶ್ಯಕವಾಗಿರುತ್ತದೆ ಎಂದು ಸಹಾಯಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.