ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಾಗಲೇ ಕೋವಿಡ್’ನಿಂದಾಗಿ ಸಾರಿಗೆ ಸಂಸ್ಥೆ ಬಸ್ ಮೂಲಕ ಪ್ರಯಾಣಿಸುವ ಸಾರ್ವಜನಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಅದರಲ್ಲೂ ಗುರುವಾರ ಶಿವಮೊಗ್ಗದಲ್ಲಿ ನಡೆದ ಗಲಭೆ ಕೆ.ಎಸ್.ಆರ್.ಟಿ.ಸಿ ಆದಾಯದ ಮೇಲೆಯೂ ಪರಿಣಾಮ ಬೀರಿದೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಪ್ರತಿನಿತ್ಯ 15-16 ಸಾವಿರ ಜನ ಓಡಾಡುತ್ತಾರೆ. ಆದರೆ, ನಿಷೇಧಾಜ್ಞೆ ಹಾಗೂ ಗಲಭೆಯ ಭೀತಿಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ 3-4 ಸಾವಿರ ಇಳಿಕೆಯಾಗಿದೆ.
ನಗರದಲ್ಲಿ 144 ಜಾರಿಯಲ್ಲಿರುವುದರಿಂದ ಬಿ.ಎಚ್.ರಸ್ತೆ ಬದಲು ಬೈಪಾಸ್ ಮೂಲಕ ಬಸ್ ಸಂಚರಿಸಿದವು. ಒಂದುವೇಳೆ, ಶನಿವಾರ ಬೆಳಗ್ಗೆ 10 ಗಂಟೆಯ ಬಳಿಕವೂ ನಿಷೇಧಾಜ್ಞೆ ಮುಂದುವರಿದರೆ ಬೈಪಾಸ್ ಮೂಲಕವೇ ಸಂಚರಿಸಲಿವೆ. ಇಲ್ಲದಿದ್ದರೆ ಎಂದಿನಂತೆ ಬಿ.ಎಚ್. ರಸ್ತೆ ಮಾರ್ಗವಾಗಿ ಓಡಾಡಲಿವೆ.
⇒ ಹಳೇ ಶಿವಮೊಗ್ಗದಲ್ಲಿ ಮುಂದುವರಿಯಲಿದೆ ಕರ್ಫ್ಯೂ
⇒ ಐಜಿಪಿ ಪ್ರೆಸ್ ಮೀಟ್ ನಲ್ಲಿ ಹೇಳಿದ್ದೇನು?