ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಕೋಮು ಗಲಭೆ ಪ್ರಕರಣ ಸಂಬಂಧಪಟ್ಟಂತೆ ಮುಂಜಾಗ್ರತಾ ಕ್ರಮವಾಗಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹತ್ತು ಜನ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (ಸ್ಪೆಷಲ್ ಎಕ್ಸ್’ಕೇಟಿವ್ ಮ್ಯಾಜಿಸ್ಟ್ರೇಟ್) ನೇಮಕ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಯಾವುದೇ ಅಹಿತರಕರ ಘಟನೆ ನಡೆಯದಂತೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ಹತ್ತು ದಿನಗಳವರೆಗೆ ಮ್ಯಾಜಿಸ್ಟ್ರೇಟ್’ಗಳನ್ನು ನೇಮಕ ಮಾಡಿ ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) ಸರ್ಕಾರದ ಜಂಟಿ ಕಾರ್ಯದರ್ಶಿ ಡಾ.ಎಲ್.ಗೀತಾ ಆದೇಶ ಹೊರಡಿಸಿದ್ದಾರೆ.
ವಾರ್ಡ್’ವಾರು ಮ್ಯಾಜಿಸ್ಟ್ರೇಟ್ ನೇಮಕ
- ಕುಮಾರ್, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- ವಾರ್ಡ್ ಸಂಖ್ಯೆ 1 ಸಹ್ಯಾದ್ರಿನಗರ, 2 ಅಶ್ವಥ್ ನಗರ, 3 ಶಾಂತಿನಗರ
- ಷಡಕ್ಷರಿ, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ- ವಾರ್ಡ್ 4 ಮಲ್ಲೇಶ್ವರನಗರ, 10 ರವೀಂದ್ರನಗರ, 11 ಬಸವನಗುಡಿ, 12 ಟ್ಯಾಂಕ್ ಮೊಹಲ್ಲಾ
- ಡಾ.ಕಿರಣ್ ಕುಮಾರ್, ಜಂಟಿ ಕೃಷಿ ನಿರ್ದೇಶಕರು- ವಾರ್ಡ್ 13 ಅರಮನೆ ಪ್ರದೇಶ, 22 ಗಾಂಧಿ ಬಜಾರ್ ಪಶ್ಚಿಮ, 23 ಗಾಂಧಿ ಬಜಾರ್ ಪೂರ್ವ
- ಗಣೇಶ್, ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ- ವಾರ್ಡ್ 5 ಗುಡ್ಡೇಕಲ್, 14 ವಿದ್ಯಾನಗರ, 15 ಹರಿಗೆ, 16 ಮಲವಗೊಪ್ಪ
- ರಾಮಚಂದ್ರ ಮಡಿವಾಳ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ- ವಾರ್ಡ್ 33 ಸವಾಯಿಪಾಳ್ಯ, 34 ವಿದ್ಯಾನಗರ, 35 ಸೂಳೆಬೈಲು
- ಮೂಕಪ್ಪ ಕರಿಭೀಮಣ್ಣಮನವರ್, ಆಯುಕ್ತರು, ಸೂಡಾ- ವಾರ್ಡ್ 27 ಮಿಳಘಟ್ಟ, 28 ಆರ್.ಎಂ.ಎಲ್. ನಗರ, 29 ಆಜಾದ್ ನಗರ, 30 ಸೀಗೆಹಟ್ಟಿ
- ಕೆ.ನಾಗರಾಜ್, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ- ವಾರ್ಡ್ 24 ಕೆ.ಎಚ್.ಬಿ. ಗೋಪಾಳ, 25 ಜೆ.ಪಿ.ನಗರ, 31 ಗೋಪಿಶೆಟ್ಟಿಕೊಪ್ಪ, 32 ಟಿಪ್ಪುನಗರ
- ಸದಾಶಿವಪ್ಪ, ಉಪ ನಿರ್ದೇಶಕರು, ಪಶುಪಾಲನೆ ಇಲಾಖೆ- ವಾರ್ಡ್ 17 ಗೋಪಾಳಗೌಡ ಬಡಾವಣೆ, 6 ಗಾಡಿಕೊಪ್ಪ, 7 ಕಲ್ಲಹಳ್ಳಿ
- ಎಚ್.ಎಂ.ಮಂಜುನಾಥಸ್ವಾಮಿ, ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ- ವಾರ್ಡ್ 18 ವಿನೋಬನಗರ, 19 ಶರಾವತಿ ನಗರ, 21 ದುರ್ಗಿಗುಡಿ, 26 ಅಶೋಕ ನಗರ
- ರಮೇಶ್, ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಇಲಾಖೆ- ವಾರ್ಡ್ 8 ಜೆ.ಪಿ.ಎನ್ ನಗರ, 9 ಗಾಂಧಿ ನಗರ, 20 ಹೊಸಮನೆ