ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುವ, ಭಾರತೀಪುರ ಕ್ರಾಸ್ ಸುತ್ತವೇ ಗಿರಕಿ ಹೊಡೆಯುವ ಈ ಕಿರು ಚಿತ್ರದಲ್ಲಿ ಸ್ನೇಹ, ಪ್ರೀತಿ, ಪ್ರೇಮ ಮತ್ತು ಪ್ರಕೃತಿಗೆ ಸಂಬಂಧಪಟ್ಟ ಹಲವು ವಿಚಾರಗಳು ವ್ಯಕ್ತವಾಗಿವೆ. ಯುವ ಮನಸ್ಸುಗಳಿಗೆ ಇಷ್ಟವಾಗುವ ಸಂಗೀತ, ಸಾಹಿತ್ಯ ಮತ್ತು ಭಾಷಾ ಬಳಕೆ ಇದೆ.
ಇದನ್ನೂ ಓದಿ | ಹೊಸ ವರ್ಷದ ಹೊಸ್ತಿಲಲ್ಲಿ ತಪ್ಪಿದ ಬಹುದೊಡ್ಡ ಅನಾಹುತ
ಪಕ್ಕಾ ಮಲೆನಾಡಿ ಭಾಷೆ, ಸೊಗಡು, ಪ್ರಕೃತಿ ಸೌಂದರ್ಯ ಇರುವುದರಿಂದ ವೀಕ್ಷಕರ ಮನಸೂರೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಜನವರಿ 1ರಂದು ಯೂಟ್ಯೂಬ್ ನಲ್ಲಿ ತೆರೆ ಕಂಡಿರುವ `ಭಾರತೀಪುರ ಕ್ರಾಸ್ ಇಂದ ಚೂರ್ ಮುಂದೆ’ ಕಿರು ಚಿತ್ರ ಹಾರರ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ.
ಭಾರತೀಪುರ ಕ್ರಾಸ್ ಇಂದ ಚೂರ್ ಮುಂದೆ ನಡೆಯುವ ಒಂದು ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ನೈಜತೆಗೆ ಹತ್ತಿರ ಎನಿಸುವ ಹತ್ತಾರು ಅಂಶಗಳು ಇಲ್ಲಿವೆ.
ರಾಘು ಹೆದ್ದೂರ್ ಅವರು ನಾಯಕನಾಗಿ ನಟಿಸಿದ್ದಾರೆ. ನಂದನ್ ಹಾಗೂ ಅಭಿ ಅವರು ನಿರ್ಮಾಣ ಮಾಡಿದ್ದಾರೆ. ಕುಮಾರ್ ಮಧುಗಿರಿ ಅವರು ಕ್ಯಾಮೆರ ಕೆಲಸ ನಿರ್ವಹಿಸಿದ್ದು, ಲಾರೆನ್ಸ್ ಅಲ್ಲನ್ ಕ್ರಿಸ್ತ, ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿರುಚಿತ್ರಕ್ಕೆ ಆಕ್ಷನ್ ಕಟ್ ಅನ್ನು ನವೀನ್ ತೀರ್ಥಹಳ್ಳಿ ಹೇಳಿದ್ದು, ಕಥೆ, ಚಿತ್ರ ಕಥೆ, ಸಂಭಾಷಣೆ, ನಿರೂಪಣೆ ಕೂಡ ಇವರೇ ಮಾಡಿದ್ದಾರೆ. ಚಿತ್ರದಲ್ಲಿ ಸಮಯೋಚಿತವಾಗಿ ಎಲ್ಲ ಹಾಡುಗಳು ಮೂಡಿಬಂದಿವೆ. ಅಂದಾಜು 1 ಲಕ್ಷ ರೂಪಾಯಿ ಬಜೆಟ್ ನಲ್ಲಿ ಚಿತ್ರ ಸಿದ್ಧವಾಗಿದೆ. ಮಹೇಶ್ ತೀರ್ಥಹಳ್ಳಿ ಅವರು ನಿಸ್ವಾರ್ಥ ಸಹಕಾರ ನೀಡಿದ್ದಾರೆ.
ಎಲ್ಲೆಲ್ಲಿ ಶೂಟಿಂಗ್: ಮಲೆನಾಡಿನಲ್ಲಿ ಲೋಕೇಶನ್ಗೇನೂ ಕೊರತೆ ಇಲ್ಲ. ಹೀಗಾಗಿ, ತೀರ್ಥಹಳ್ಳಿ ಸುತ್ತ ಮುತ್ತವೇ ಚಿತ್ರೀಕರಣ ಮಾಡಲಾಗಿದೆ. ಭಾರತೀಪುರ, ರಾಮೇಶ್ವರ, ಕುರವಳ್ಳಿ ಸೇತುವೆ, ಅರಣ್ಯ ಪ್ರದೇಶ ಮತ್ತು ಯಡಿಯೂರಇನ ಕೆಲವೆಡೆ ಚಿತ್ರೀಕರಣ ಮಾಡಲಾಗಿದೆ.
ಸಾಲು ಸಾಲು ಸವಾಲು: ತಾರಾಗಣದಲ್ಲಿರುವ ಎಲ್ಲರೂ ಹೊಸ ಪ್ರತಿಭೆಗಳೇ ಆಗಿವೆ. ಎಲ್ಲರೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಆರು ದಿನಗಳ ಕಾಲ ಚಿತ್ರೀಕರಣಗೊಂಡು ಈಗ ಕನ್ನಡಿಗರ ಮನಃತಟ್ಟಲು ಬಿಡುಗಡೆಗೊಂಡಿದೆ.
ಇದನ್ನೂ ಓದಿ | ಹಳಿ ತಪ್ಪಿದ ರೈಲು ಪ್ರಯಾಣಿಕರ ಹಣ ರೀಫಂಡ್
ಕಿರು ಚಿತ್ರಕ್ಕೆ ಪ್ರೇರಣೆ: ಭಾರತೀಪುರ ಕ್ರಾಸ್ ಕಡೆಯಿಂದ ಹೋಗುವಾಗಲೊಮ್ಮೆ ಇದರ ಬಗ್ಗೆ ಒಂದು ಚಿತ್ರ ಮಾಡಬೇಕು ಎನಿಸುತ್ತಿತ್ತು. ಹೀಗಾಗಿ, ಈ ಹೆಸರಿನಲ್ಲಿಯೇ ಚಿತ್ರ ಮಾಡಲಾಗಿದೆ. ಆರಂಭದಿಂದಲೂ ಕಥೆಗಳನ್ನು ಬರೆಯುವ ಹವ್ಯಾಸ ಇದೆ. ಹಿರಿತೆರೆಗೂ ಅಗತ್ಯವಿರುವ ಕಥೆಗಳನ್ನೂ ಬರೆದಿದದ್ದೇನೆ. ಆದರೆ, ಎಲ್ಲಿಯೂ ಸೂಕ್ತ ವೇದಿಕೆ ಸಿಕ್ಕಿಲ್ಲ. ಹೀಗಾಗಿ, ಕಿರುಚಿತ್ರದ ಕಡೆಗೆ ಮುಖ ಮಾಡಿದ್ದೇನೆ ಎಂದು ಚಿತ್ರದ ನಿರ್ದೇಶಕ ನವೀನ್ ತೀರ್ಥಹಳ್ಳಿ ಅವರು ಸುದ್ದಿ ಕಣಜ.ಕಾಂಗೆ ತಿಳಿಸಿದ್ದಾರೆ.
ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ ಬಾಲರಾಜ್ ವಾಡಿ ಅವರು ಹಿನ್ನೆಲೆ ಧ್ವನಿ ನೀಡಿ ಸಹಕರಿಸಿ, ಆಶೀರ್ವದಿಸಿದ್ದಾರೆ. ಅತಿ ಹೆಚ್ಚಿನ ನಿರೀಕ್ಷೆ, ಸಹಕಾರ ಈ ಚಿತ್ರಕ್ಕಿದೆ ಎಂದು ಹೇಳಿದ್ದಾರೆ.
ಕಿರುಚಿತ್ರ ಒಮ್ಮೆ ನೋಡಲೇಬೇಕು: ತೀರ್ಥಹಳ್ಳಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಹೊಸವರ್ಷಕ್ಕೆ ಚಿತ್ರ ಬಿಡುಗಡೆಯಾಗಿದೆ.
click here | ಭಾರತೀಪುರ ಕ್ರಾಸ್ ಇಂದ ಚೂರ್ ಮುಂದೆ