ಸುದ್ದಿ ಕಣಜ.ಕಾಂ
ಶಿವಮೊಗ್ಗ: ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಈ ಕೇಂದ್ರದಿಂದ ಸರಬರಾಜು ಆಗುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಜನವರಿ 5ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ | ಕೊಳೆಗೇರಿ ನಿವಾಸಿಗಳಿಗೆ ಸಿಹಿ ಸುದ್ದಿ
ಎಲ್ಲೆಲ್ಲಿ: ಜೆಎನ್.ಎನ್.ಸಿ.ಇ ಕಾಲೇಜು ಮುಂಭಾಗದ ಪ್ರದೇಶ, ಕುವೆಂಪು ಬಡಾವಣೆ, ರೆಡ್ಡಿ ಲೇಔಟ್, ಪರ್ಫೆಕ್ಟ್ ಅಲಾಯ್ಸ್, ಎಂಜಿನಿಯರಿಯರಿಂಗ್ ಕಾಲೇಜು, ನವುಲೆ, ಬೊಮ್ಮನಕಟ್ಟೆಯ ಎ ದಿಂದ ಎಚ್ ಬ್ಲಾಕ್ ವರೆಗೆ, ಕುವೆಂಪುನಗರ, ಜ್ಯೋತಿನಗರ, ಡಾಲರ್ಸ್ ಕಾಲೊನಿ, ಎಲ್ಬಿಎಸ್ ನಗರ, ಅಶ್ವಥ್ ನಗರ, ಬಸವೇಶ್ವರ ನಗರ, ಕೃಷಿ ನಗರ, ಕೀರ್ತಿನಗರ, ಪವನಶ್ರೀ ಲೇಔಟ್, ಶಾಂತಿನಗರ, ತ್ಯಾವರೆಚಟ್ನಹಳ್ಳಿ, ಸವಳಂಗ ರಸ್ತೆ, ಶಿವಬಸವ ನಗರ, ಶಂಕರಮಠ ರಸ್ತೆ (ವೆಹಿಕಲ್ ಶೋರೂಂ, ರೈಸ್ ಮಿಲ್ ಏರಿಯಾ), ಗುಂಡಪ್ಪ ಶೆಡ್, ಶೇಷಾದ್ರಿಪುರಂ ಹಾಗೂ ಸುತ್ತಲಿನ ಪ್ರದೇಶಗಳು. ಸಾರ್ವಜನಿಕರು ಸಹಕರಿಸುವಂತೆ ನಗರ ಉಪ ವಿಭಾಗ 1ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಶಾಲಾರಂಭದ ಮೊದಲ ದಿನ ಹೇಗಿತ್ತು? ಏನೆಲ್ಲ ವ್ಯವಸ್ಥೆ ಮಾಡಲಾಗಿತ್ತು?