ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲ್ಲ ಚಲನಚಿತ್ರದಲ್ಲಿ ಮಿಂಚಿದ್ದ 35 ವರ್ಷದ ಮಣಿಕಂಠ ಆನೆ ಸೋಮವಾರ ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಲ್ಲಿ ಕೆಲಹೊತ್ತು ಜೀವ ಬಾಯಿಗೆ ಬರುವಷ್ಟು ಆತಂಕ ಸೃಷ್ಟಿಸಿದ್ದ.
ಇದನ್ನೂ ಓದಿ | ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ, ಖಾತೆ ಸೇರಿ ಕಂಪ್ಲೀಟ್ ಮಾಹಿತಿ ಇಲ್ಲಿದೆ
ಬೆಳಗ್ಗೆ ಸ್ನಾನಕ್ಕೆಂದು ಪ್ರತಿನಿತ್ಯದಂತೆ ತುಂಗೆಯ ಹಿನ್ನೀರಿಗೆ ಮಣಿಕಂಠನನ್ನು ಕರೆದುಕೊಂಡು ಬರಲಾಗಿದೆ. ಆದರೆ, ಏಕಾಏಕಿ ನಾಗಣ್ಣ ಮತ್ತು ಮರಿಯೊಂದರ ಮೇಲೆ ಎರಗಿದ್ದನೆ. ಆ ಆನೆಗಳು ಭಯದಿಂದ ತುಂಗಾ ಹಿನ್ನೀರಿಗೆ ಇಳಿದಿವೆ. ಅಲ್ಲಿಯೂ ಹಿಂಬಾಲಿಸಿಕೊಂಡು ಬಂದ ಮಣಿಕಂಠ ಮತ್ತೆ ತನ್ನ ಮೊನಚಾದ ದಂತಗಳಿಂದ ನಾಗಣ್ಣ ಎಂಬ ಆನೆಗೆ ತಿವಿದಿದ್ದಾನೆ. ನಾಗಣ್ಣ ಮೇಲಿದ್ದ ಮಾವುತ ಗೌಸ್ ಮಣಿಕಂಠನ ಪುಂಡಾಟ ಕಂಡು ಅರ್ಧ ಜೀವವಾಗಿದ್ದಾನೆ. ತಕ್ಷಣ ಆನೆಯನ್ನು ಇನ್ನಷ್ಟು ಆಳದ ನೀರಿಗೆ ಕರೆದೊಯ್ದಿದ್ದಾನೆ. ಅಲ್ಲಿಯೂ ಹಿಂಬಾಲಿಸಿದ್ದಕ್ಕೆ ತಕ್ಷಣ ಪಕ್ಕದಲ್ಲೇ ಇದ್ದ ನಡುಗಡ್ಡೆಯ ಮೇಲೆ ಜಿಗಿದು ಜೀವ ಉಳಿಸಿಕೊಂಡಿದ್ದಾನೆ.
ಇದನ್ನೂ ಓದಿ | ರಾಜ್ಯಾಧ್ಯಕ್ಷರಿಗೆ ಆನೆಯೇ ಮಾಡ್ತು ಸ್ವಾಗತ
ಕ್ರಾಲ್ ಪಾಲಾದ ಮಣಿಕಂಠ: ಆನೆಯ ಅಟ್ಟಹಾಸವನ್ನು ಕಂಡು ತಕ್ಷಣ ಸಕ್ರೆಬೈಲು ಆನೆಬಿಡಾರದ ಮಾವುತರು ಮತ್ತು ಕಾವಾಡಿಗಳು ಮಣಿಕಂಠನನ್ನು ಹಿಡಿಯಲು ಮುಂದಾಗಿದ್ದಾರೆ. ಎರಡ್ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ಅದನ್ನು ಹಿಡಿದು ಕ್ರಾಲ್ ಗೆ ಅಟ್ಟಿದ್ದಾರೆ.
ಮಣಿಕಂಠನದ್ದು ಸದಾ ರಗಳೆ: ಮಣಿಕಂಠ ಆನೆ ಎಲ್ಲಿಯೇ ಹೋದರೂ ರಗಳೆ ಮಾತ್ರ ಬಿಟ್ಟಿಲ್ಲ. ಈ ಹಿಂದೆ ಬಂಡೀಪುರ, ಬನ್ನೇರಘಟ್ಟ, ಮತ್ತಿಗೋಡು ಮತ್ತು ದಾಂಡೇಲಿಯಲ್ಲಿ ಇದ್ದಾಗಳು ಪುಂಡಾನೆ ತೋರಿದ್ದಾನೆ. ಅದಕ್ಕಾಗಿಯೇ ಅದನ್ನು ಸಕ್ರೆಬೈಲು ಆನೆಬಿಡಾರಕ್ಕೆ ಕಳುಹಿಸಲಾಗಿದೆ. ಇಷ್ಟಾದರೂ ಅಟ್ಟಹಾಸ ಮಾತ್ರ ನಿಂತಿಲ್ಲ.