ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ಆರನೇ ಮುಖ್ಯರಸ್ತೆಯ 1 ಮತ್ತು 2ನೇ ಅಡ್ಡರಸ್ತೆಯಲ್ಲಿರುವ 25ಕ್ಕೂ ಅಧಿಕ ಮನೆಯೊಳಗೆ ನೀರು ಹೊಕ್ಕಿ ಭಾರಿ ಆವಾಂತರವಾಗಿದೆ.
ವಿಡಿಯೋ ರಿಪೋರ್ಟ್
ತಡರಾತ್ರಿ ಏಕಾಏಕಿ ಮಳೆ ಶುರುವಾಗಿದ್ದು, ರಾಜಕಾಲುವೆ ತುಂಬಿ ಹರಿದ ಪರಿಣಾಮ ನೀರು ಮನೆಯೊಳಗೆ ಹೊಕ್ಕಿದೆ. ತಕ್ಷಣ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಮತ್ತು ಮುಖಂಡರಾದ ರಂಗೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂತ್ರಸ್ತರಿಗೆ ಸಮಾಧಾನ ಹೇಳಿದ್ದಾರೆ.
Rain News | ಅಕಾಲಿಕ ಮಳೆಗೆ ಹೊಸಮನೆಯಲ್ಲಿ ನೆರೆ, ಮನೆಯೊಳಗೆ ಹೊಕ್ಕಿದ ನೀರು, ರಾತ್ರಿಯಿಡೀ ಜನರ ಸಂಕಟ , ಮಲೆನಾಡಿನಲ್ಲಿ ಮತ್ತೆ ಶುರುವಾಯ್ತು ಮಳೆ, ಕಳೆದ ಅರ್ಧ ಗಂಟೆಯಿಂದ ಧಾರಾಕಾರ ಮಳೆ
ಆಯುಕ್ತರ ಭೇಟಿ: ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ಅವರು ಹೊಸಮನೆ ಬಡಾವಣೆಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜಕಾಲುವೆಯಲ್ಲಿ ತುಂಬಿರುವ ಹೂಳು ತೆಗೆಯುವಂತೆ ನಿರ್ದೇಶನ ನೀಡಿದ್ದಾರೆ. ಅದರನ್ವಯ ಕಾರ್ಯ ಕೂಡ ಆರಂಭಗೊಂಡಿದೆ.