ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವ್ಯಾಕ್ಸಿನ್ ಪಡೆದಿದ್ದ ನಗರದ ಹಿರಿಯ ಹಾಗೂ ಖ್ಯಾತ ವೈದ್ಯರೊಬ್ಬರು ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆದರೆ, ಸಾವಿಗೆ ವ್ಯಾಕ್ಸಿನ್ ಕಾರಣವಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
58 ವರ್ಷದ ಡಾ.ಟಿ.ಎ.ಜಯಪ್ರಕಾಶ್ ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೂರು ದಿನಗಳ ಹಿಂದೆ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು ಸಾವಿಗೆ ಹೃದಯಾಘಾತ ಕಾರಣವೇ ವಿನಹ ವ್ಯಾಕ್ಸಿನ್ ಅಡ್ಡಪರಿಣಾಮವಲ್ಲ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮೂಲಗಳು `ಸುದ್ದಿ ಕಣಜ.ಕಾಂ’ಗೆ ತಿಳಿಸಿವೆ.