ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿನಾಯಕ ನಗರದ ನವ್ಯಶ್ರೀ ಸಭಾಂಗಣದಲ್ಲಿ ಜನವರಿ 24ರಂದು ಬೆಳಗ್ಗೆ 10 ಗಂಟೆಗೆ ಮದ್ಯಪಾನದಿಂದ ಮುಕ್ತರಾಗುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿದೆ ಎಂದು ಎ.ಎ. (ಅನಾಮಿಕ್ ಮದ್ಯರೋಗಿಗಳ ಬಾಂಧವ್ಯ) ಸದಸ್ಯರು ಹೇಳಿದರು.
ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮದ್ಯಪಾನ ಹಲವು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಕೌಟುಂಬಿಕವಾಗಿಯೂ ಸಾಕಷ್ಟು ಸಮಸ್ಯೆಗಳು ಉಲ್ಬಣಿಸುತ್ತಿವೆ. ಮಾನಸಿಕ, ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಮದ್ಯಪಾನದಿಂದ ದೂರ ಉಳಿಯಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಎಎ ಸದಸ್ಯರು ಅವರ ಸಹಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಮದ್ಯಪಾನ ಚಟಕ್ಕೆ ಒಳಗಾದವರೇ ಮಾದರಿ | ಎಎ ಸದಸ್ಯರು ತಾವೇ ಮದ್ಯಪಾನದ ಸಮಸ್ಯೆಗೆ ಗುರಿಯಾಗಿದ್ದು, ಚಟದಿಂದಾಗುವ ಎಲ್ಲ ಸಮಸ್ಯೆಗಳನ್ನು ಅತ್ಯಂತ ಹತ್ತಿರದಿಂದಲೇ ಅನುಭವಿಸಿದ್ದಾರೆ. ಈಗ ಕುಡಿತದಿಂದ ದೂರ ಉಳಿದಿದ್ದಾರೆ. ತಮ್ಮ ಅನುಭವ, ಬೆಂಬಲ ಮತ್ತು ಭರವಸೆಗಳ ಆಧಾರದಿಂದ ಕುಡಿತದಿಂದ ದೂರವಿರಲು ಸಹಾಯ ಮಾಡುತ್ತಾರೆ.
ಜಗತ್ತಿನಾದ್ಯಂತ ಎಎ ಕಾರ್ಯನಿರ್ವಹಣೆ | ಎಎ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ 500 ಕ್ಕೂ ಅಧಿಕ ಭಾಂಧವ್ಯಗಳು ಕಾರ್ಯಪ್ರವೃತ್ತವಾಗಿವೆ.
ಮಾಹಿತಿಗಾಗಿ ಇವರಿಗೆ ಸಂಪರ್ಕಿಸಿ | ಕಾರ್ಯಕ್ರಮ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ. ಇಲ್ಲಿ ಭಾಗವಹಿಸಿದವರ ಮಾಹಿತಿಗಳನ್ನು ಗುಪ್ತವಾಗಿ ಇಡಲಾಗುವುದು. ಹೀಗಾಗಿ, ಯಾರೂ ಭಯ ಪಡುವ ಅಗತ್ಯವೇ ಇಲ್ಲ. ಮಾಹಿತಿಗಾಗಿ 9900716304, 98863 36011 ಸಂಪರ್ಕಿಸುವಂತೆ ಕೋರಲಾಗಿದೆ.