ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಜನ್ಮದಿನ ಆಚರಿಸುವುದಕ್ಕಾಗಿ ಬಂದಿದ್ದ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಮೃತಪಟ್ಟವರನ್ನು ಐಟಿಐ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಮಾಸ್ತಿಕಟ್ಟೆಯ ನೀಲಕಂಠ(17), ಶೃಂಗೇರಿಯ ಕಿರಣ್ (21) ಮೃತಪಟ್ಟಿದ್ದಾರೆ.
ಎಲ್ಲಿ ನಡೆಯಿತು ಘಟನೆ | ತೀರ್ಥಹಳ್ಳಿಯ ತುಂಗಾ ನದಿ ಸಮೀಪದ ರಾಮ ಮಂಟಪ ಬಳಿ ಶುಕ್ರವಾರ ಪಾರ್ಟಿ ಮಾಡುವುದಕ್ಕಾಗಿ ಬಂದಿದ್ದಾರೆ. ಬಳಿಕ ಈಜಲು ನೀರಿಗೆ ಇಳಿದಿದ್ದಾರೆ. ಆಗ ಸಾವನ್ನಪ್ಪಿದ್ದಾರೆ. ಇವರೊಂದಿಗೆ ಎಷ್ಟು ಜನ ಬಂದಿದ್ದರು ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.