ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಉಪ ಮೇಯರ್ ಸುರೇಖಾ ಮುರುಳೀಧರ್, ಆಡಳಿತ ಪಕ್ಷದ ಮುಖಂಡ ಚನ್ನಬಸಪ್ಪ ಅವರು ಪಾಲಿಕೆ ಸದಸ್ಯೆ ಯಮುನಾ ಅವರ ಮೇಲೆ ಕಿಡಿ ಕಾರಿದರು.
ಇದನ್ನೂ ಓದಿ । ಶಿವಮೊಗ್ಗದಲ್ಲಿ ಇನ್ಮುಂದೆ ಗೋಹತ್ಯೆ ವಿರುದ್ಧ ಖಡಕ್ ಕ್ರಮ, ಏನೆಲ್ಲ ಚರ್ಚಿಸಲಾಯಿತು ಇಲ್ಲಿದೆ ಮಾಹಿತಿ
‘ನೀವು ಮನೆಯಲ್ಲಿ ಹೇಗೆ ಬೇಕಾದರೂ ಮಾತನಾಡಿ. ಆದರೆ, ಸಭೆಗೆ ತನ್ನದೇ ಆದ ಗೌರವವಿದೆ. ಮಹಾಪೌರರ ಅಪ್ಪಣೆ ಪಡೆದು ಮಾತನಾಡಿ, ಸಭೆಯ ನಡವಳಿಕೆಯನ್ನು ತಿಳಿದುಕೊಳ್ಳಿ. `ಸಭೆಯಲ್ಲಿ ಮೇಯರ್ ಅವರ ಮುಂದೆ ಕುಳಿತುಕೊಂಡು ಮಾತನಾಡುವುದು ಸರಿಯಲ್ಲ ಎಂದು ಸುರೇಖಾ ಹರಿಹಾಯ್ದರು. ಅದಕ್ಕೆ ಕೆಂಡಾಮಂಡಲವಾದ ಯಮುನಾ ಕೂಡ ಉತ್ತರ ನೀಡಿದರು. ಅದಾದ ಬಳಿಕ ರಮೇಶ್ ಹೆಗಡೆ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.
ಆಯುಕ್ತರೇ ಟ್ರೈನಿಂಗ್ ಕೈಗೊಳ್ಳಿ | ಪಾಲಿಕೆ ಸಭೆಯಲ್ಲಿ ಸದಸ್ಯರು ವರ್ತಿಸುವುದು ನೋಡಿದರೆ ಅವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯ ಅಗತ್ಯವಿದೆ ಎನಿಸುತ್ತದೆ. ಆದ್ದರಿಂದ, ಸಭೆಯ ನಡಾವಳಿ, ವರ್ತಿಸುವ ರೀತಿ… ಹೀಗೆ ವಿವಿಧ ವಿಚಾರಗಳ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಉಪ ಮೇಯರ್ ಅವರು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.
ಮೇಯರ್ ಸುವರ್ಣ ಶಂಕರ್ ಉಪಸ್ಥಿತರಿದ್ದರು.
ಆಯುಕ್ತರೇ ಟ್ರೈನಿಂಗ್ ಕೈಗೊಳ್ಳಿ | ಪಾಲಿಕೆ ಸಭೆಯಲ್ಲಿ ಸದಸ್ಯರು ವರ್ತಿಸುವುದು ನೋಡಿದರೆ ಅವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯ ಅಗತ್ಯವಿದೆ ಎನಿಸುತ್ತದೆ. ಆದ್ದರಿಂದ, ಸಭೆಯ ನಡಾವಳಿ, ವರ್ತಿಸುವ ರೀತಿ… ಹೀಗೆ ವಿವಿಧ ವಿಚಾರಗಳ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಉಪ ಮೇಯರ್ ಅವರು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.
ಮೇಯರ್ ಸುವರ್ಣ ಶಂಕರ್ ಉಪಸ್ಥಿತರಿದ್ದರು.