ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳ ವಿರುದ್ಧ ಸಿಡಿದೆದ್ದ ಅನ್ನದಾತ ಕಳೆದ ಹಲವು ದಿನಗಳಿಂದ ರಾಷ್ಟ್ರದ ರಾಜಧಾನಿಯಲ್ಲಿ ಪ್ರತಿಭಟನಾನಿರತನಾಗಿದ್ದಾನೆ. ಗಣರಾಜ್ಯೋತ್ಸವದ ಪ್ರಯುಕ್ತ ಕರೆ ನೀಡಿದ್ದ ಟ್ರಾಕ್ಟರ್ ರ್ಯಾಲಿಗೆ ಶಿವಮೊಗ್ಗದಲ್ಲಿ ಭಾರೀ ಸ್ಪಂದನೆ ಸಿಕ್ಕಿದೆ.
ನಗರದ ಸೈನ್ಸ್ ಫೀಲ್ಡ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಟ್ರಾಕ್ಟರ್ ಮೂಲಕ ಹತ್ತಿ ಹೋರಾಟಕ್ಕೆ ಇಳಿದಿದ್ದು, ಗಮನಾರ್ಹವಾಗಿತ್ತು.
ಕಾಗೋಡು ಪುತ್ರಿಯೂ ಟ್ರಾಕ್ಟರ್ ಡ್ರೈವ್ | ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರು ಟ್ರಾಕ್ಟರ್ ಚಲಾಯಿಸಿಕೊಂಡು ಬಂದು ಗಮನ ಸೆಳೆದರು. ಅವರೊಂದಿಗೆ ಮಹಿಳೆಯರು ಟ್ರಾಕ್ಟರ್ ಹತ್ತಿದ್ದರು. ಡಾ.ಶ್ರೀನಿವಾಸ್, ಅನಿತಾ ಕುಮಾರಿ ಉಪಸ್ಥಿತರಿದ್ದರು.