ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಡಕೆ ಕದ್ದು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು | ತುಂಗಾನಗರ ನಿವಾಸಿ ತೌಸಿಫ್ ಉಲ್ಲಾ ಅಲಿಯಾಸ್ ಗಿರಪಡೆ (23), ಆರ್.ಎಂ.ಎಲ್ ನಗರದ ಮಹಪೂಜ್ ಅಲಿಯಾಸ್ ಮಹಮ್ಮದ್ ಮಹಪೂಜ್ (23) ಹಾಗೂ ಅಜೀಜ್ ಉಲ್ಲಾಖಾನ್ ಅಲಿಯಾಸ್ ಪಾಪೆ (24) ಎಂಬುವವರನ್ನು ಬಂಧಿಸಲಾಗಿದೆ.
4.25 ಲಕ್ಷ ರೂಪಾಯಿ ಮೌಲ್ಯದ ಅಡಕೆ ವಶ | ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ 2021ನೇ ಸಾಲಿನಲ್ಲಿ ಮೂರು ಹಾಗೂ 2020ನೇ ಸಾಲಿನಲ್ಲಿ ಎರಡು ಸೇರಿ ಒಟ್ಟು ಐದು ಅಡಕೆ ಕಳ್ಳತನ ಪ್ರಕರಣ ದಾಖಲಾಗಿವೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ತಂಡ 1000 ಕೆ.ಜಿ. ತೂಕದ ಅಂದಾಜು 4.25 ಲಕ್ಷ ರೂಪಾಯಿ ಮೌಲ್ಯದ ಅಡಕೆಯನ್ನು ವಶಕ್ಕೆ ಪಡೆಯಲಾಗಿದೆ.
ಕೃತ್ಯಕ್ಕೆ ಬಳಸಲಾದ 1 ರೆನಾಲ್ಟ್ ಡಸ್ಟರ್ ಕಾರು, 1 ಸ್ಕೂಟಿ ಮತ್ತು 1 ಪಲ್ಸರ್ ಬೈಕ್ ಅನ್ನು ವಶ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಕಾರ್ಯಾಚರಣೆ ತಂಡ | ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಡಿ.ವೈ.ಎಸ್.ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆ ಸಿಪಿಐ ಎಂ.ಎಸ್.ದೀಪಕ್ ನೇತೃತ್ವದಲ್ಲಿ ಪಿ.ಎಸ್.ಐ ತಿರುಮಲೇಶ್, ಜಿ.ಆರ್.ನಾರಾಯಣ್, ಸಿಬ್ಬಂದಿ ಸೈಯದ್ ಇಮ್ರಾನ್, ರಾಜು, ಗುರುನಾಯಕ್, ಲಂಕೇಶ್ ಕುಮಾರ್, ಅರುಣ್ ಕುಮಾರ್ ತಂಡ ಕಾರ್ಯಾಚರಣೆ ನಡೆಸಿದೆ.