ಸುದ್ದಿ ಕಣಜ.ಕಾಂ
ಚಿಕ್ಕಮಗಳೂರು: ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚೆಂದರೆ ಎಷ್ಟು ತಂಡಗಳು ಭಾಗವಹಿಸುವ ಇಂಗಿತ ವ್ಯಕ್ತಪಡಿಸಬಹುದು? ಇಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಬರೋಬ್ಬರಿ 400ಕ್ಕೂ ಅಧಿಕ ಕ್ರಿಕೆಟ್ ತಂಡಗಳು ಭಾಗವಹಿಸಲು ಮುಂದೆ ಬಂದಿವೆ. ಇದರಿಂದ ಬೆಸ್ತುಬಿದ್ದ ಆಯೋಜಕ ಪಂದ್ಯಾವಳಿಯನ್ನೇ ರದ್ದುಗೊಳಿಸಿದ್ದಾನೆ!
ಬಹುಮಾನದಲ್ಲಿ ಅಂತಹದ್ದೇನಿತ್ತು
- ಮೊದಲನೇ ಬಹುಮಾನ | 30 ಕೆಜಿ ತೂಕದ ಕುರಿ, 1 ಬಾಟೆಲ್ ಎಂಸಿ ವಿಸ್ಕಿ, 1 ಕೇಸ್ ಬೀಯರ್
- ಎರಡನೇ ಬಹುಮಾನ | 6 ನಾಟಿ ಕೋಳಿ, 1 ಬಾಟಲ್ ದುಬಾರಿ ಮದ್ಯ, 1 ಕೇಸ್ ಬೀಯರ್
- ಸಮಾಧಾನಕರ ಬಹುಮಾನ | ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಟೀಂಗಳಿಗೆ ಕೂಲ್ ಡ್ರಿಂಕ್ಸ್
- ಮ್ಯಾನ್ ಆಫ್ ದ ಸಿರೀಸ್ ಗೆ 5 ಕೆಜಿ ಈರುಳ್ಳಿ, ಬೆಸ್ಟ್ ಬ್ಯಾಟ್ಸ್ ಮನ್ ಗೆ 1 ಕೆಜಿ ಖಾರದಪುಡಿ, ಬೆಸ್ಟ್ ಬೌಲರ್ ಗೆ 2 ಲೀಟರ್ ಸನ್ ಫ್ಲವರ್ ಆಯಿಲ್.
ಆಯೋಜಕರು ಈ ಸಂಬಂಧ ಒಂದು ಹ್ಯಾಂಡ್ ಬಿಲ್ ಪ್ರಕಟಿಸಿದ್ದು, ಸುನಾಮಿ ರೀತಿಯಲ್ಲಿ ಇವರಿಗೆ ಫೋನ್ ಕರೆ ಬಂದಿವೆ. ಆಗ ಪಂದ್ಯಾವಳಿ ರದ್ದುಗೊಳಿಸುವುದಾಗಿ ಹೇಳಲಾಗಿದೆ. ಸದ್ಯಕ್ಕೆ ಪಂದ್ಯಾವಳಿ ರದ್ದುಪಡಿಸಲಾಗಿದೆ.
ನೀಡಿದ್ದ ಸೂಚನೆಗಳೇನು | ಖಾಂಡ್ಯ ಕ್ರಿಕೆಟ್ ಪ್ರಿಮಿಯರ್ ಲೀಗ್ ನಲ್ಲಿ ಆಡಿದ ಸ್ಥಳೀಯ ತಂಡಗಳೀಗೆ ಅವಾಕಾಶ ನೀಡುವುದಾಗಿ ಷರತ್ತು ವಿಧಿಸಲಾಗಿತ್ತು. ಆದರೂ ರಾಜ್ಯದ ವಿವಿಧೆಡೆಯಿಂದ ಫೋನ್ ಕರೆಗಳು ಎಗ್ಗಿಲ್ಲದೆ ಬಂದಿವೆ. ಇದರಿಂದ ಬೇಸತ್ತು ಆಯೋಜಕರು ಟೂರ್ನಿಯನ್ನೇ ಮುಂದೂಡಿದ್ದಾರೆ.