ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರ ಉಪ ವಿಭಾಗ 2 ವ್ಯಾಪ್ತಿಯಲ್ಲಿ ಜನವರಿ 30ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ । ಶಿವಮೊಗ್ಗಕ್ಕೆ ಬರಲಿದ್ದಾರೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್
ಎಲ್ಲೆಲ್ಲಿ ಸಭೆ | ಒ.ಟಿ. ರಸ್ತೆಯ ಕೃಷಿ ಕಟ್ಟಡದಲ್ಲಿ ನಗರ ಉಪ ವಿಭಾಗ 2ರ ಸಭೆ ನಡೆಯಲಿದೆ ಅದೇ ರೀತಿ, ಕೆ.ಆರ್.ಪುರಂ ಸರ್ಕಾರಿ ಶಾಲೆ ಸಮೀಪದ ಘಟಕ 4, ಆರ್.ಎಮ್.ಎಲ್.ನಗರದ ಭಾರತೀಯ ಸಭಾ ಭವನದ ಘಟಕ 5 ಸಹಾಯಕ ಇಂಜಿನಿಯರ್(ವಿ) ಘಟಕ 5, ನ್ಯೂ ಮಂಡ್ಲಿಯ 100 ಅಡಿ ರಸ್ತೆಯ ಘಟಕ 6ರಲ್ಲಿ ಸಭೆ ನಡೆಯಲಿದೆ. ಸಾರ್ವಜನಿಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳನ್ನು ನೀಡಬೇಕೆಂದು ಕೋರಲಾಗಿದೆ.