ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣೆ ಕೇಂದ್ರಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಕೆಯ ಸ್ಮಾರ್ಟ್ ಸಿಟಿ ಯೋಜನೆಯ ಪೂರಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜನವರಿ 31ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ । ಜನವರಿ 30ರಂದು ಮೆಸ್ಕಾಂ ಜನಸಂಪರ್ಕ ಸಭೆ, ಎಲ್ಲೆಲ್ಲಿ ನಡೆಯಲಿದೆ ಗೊತ್ತಾ?
ಇಲ್ಲಿ ಕರೆಂಟ್ ಇರಲ್ಲ | ಪಿಯರ್ ಲೈಟ್ ಕೈಗಾರಿಕೆ, ಎನ್.ಟಿ.ರಸ್ತೆ, ಬಿ.ಎಚ್.ರಸ್ತೆ, ಟೆಂಪೋ ಸ್ಟ್ಯಾಂಡ್ ಡೌನ್, ಜೆ.ಸಿ.ನಗರ, ಮಿಳ್ಳಘಟ್ಟ, ಮಾರ್ನಮಿಬೈಲು, ಮಂಡ್ಲಿ ವೃತ್ತ, ಇಲಿಯಾಸ್ನಗರ 8ನೇ ಅಡ್ಡ ರಸ್ತೆಯಿಂದ 13ನೇ ಅಡ್ಡ ರಸ್ತೆಯವರೆಗೆ, ಆರ್.ಎಂ.ಎಲ್.ನಗರದ ಮೊದಲನೇ ಮತ್ತು ಎರಡನೇಯ ಹಂತ, ಮಂಜುನಾಥ ಬಡಾವಣೆ, ಟಿಪ್ಪುನಗರ ಎಡಭಾಗ, ಆನಂದರಾವ್ ಬಡಾವಣೆ, ಮಿಳ್ಳಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪ ವಿಭಾಗದ 2ರ ಸಹಾಯಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.