ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಶ್ವಥ್ ನಗರದಲ್ಲಿರುವ ಸೆಂಟ್ರಲ್ ಜಿ.ಎಸ್.ಟಿ ಕಚೇರಿ ಹಾಗೂ ಗೋಪಾಳಗೌಡ ಬಡಾವಣೆಯ ರಾಜ್ಯ ಜಿ.ಎಸ್.ಟಿ ಕಚೇರಿ ಅಧಿಕಾರಿಗಳಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಕರ್ನಾಟಕ ಟ್ಯಾಕ್ಸ್ ಪೇಯರ್ಸ್ ಅಸೋಸಿಯೇಷನ್ ನಿಂದ ಮನವಿ ಪತ್ರ ಸಲ್ಲಿಸಲಾಯಿತು.
ಜಿ.ಎಸ್.ಟಿ ಕಾಯ್ದೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಸರಿಪಡಿಸುವಂತೆ ಹಲವು ಸಲ ಮನವಿ ಮಾಡಲಾಗಿದೆ. ಆದರೆ, ಪರಿಹಾರ ನೀಡದ್ದಕ್ಕೆ ವ್ಯಾಪಾರಸ್ಥರು ಕಷ್ಟಪಡುವಂತಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ವ್ಯಾಪಾರ ಮತ್ತು ವೃತ್ತಿ ಪರ ತೆರಿಗೆದಾರರಲ್ಲಿ ಆರ್ಥಿಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಜಿ.ಎಸ್.ಟಿ. ಕಾಯ್ದೆಯಲ್ಲಿನ ವಿವಿಧ ಬದಲಾವಣೆಗಳು ಹಾಗೂ ಪೆÇೀರ್ಟಲ್ ನಲ್ಲಿರುವ ಲೋಪಗಳನ್ನು ಸರ್ಕಾರ ಸರಿಪಡಿಸಬೇಕು.
ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ನಿರಾಕರಣೆ ಜಿ.ಎಸ್.ಟಿ. ರಿಟರ್ನ್ ಮರು ಪರಿಶೀಲಿಸಲು ಅನುಮತಿ ಇಲ್ಲದಿರುವುದು ನೋಂದಣಿ ರದ್ದುಗೊಳಿಸುವಿಕೆ, ಆದಾಯ ತೆರಿಗೆ ಉಪಯುಕ್ತತೆ, ಜಿ.ಎಸ್.ಟಿ. ಪೆÇೀರ್ಟಲ್ ಸಮಸ್ಯೆ ಮೊದಲಾದವುಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಜಿ.ಎಸ್.ಟಿ. ಯನ್ನು ಸರಳೀಕರಣಗೊಳಿಸಬೇಕು. ಕೆಲವು ನಿಯಮಗಳನ್ನು ರದ್ದುಗೊಳಿಸಬೇಕು. ಜಿ.ಎಸ್.ಟಿ.ಗೆ ಮರು ರೂಪಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ರಿಟನ್ರ್ಸ್ ಸಲ್ಲಿಸುವಲ್ಲಿ ವಿಳಂಬವಾದರೆ ದಂಡ ಕಟ್ಟುವ ಸ್ಥಿತಿ ಇದೆ. ಇದನ್ನು ಕೂಡಲೇ ಮನ್ನಾ ಮಾಡಬೇಕು. ತೆರಿಗೆದಾರರಿಗೆ, ವ್ಯಾಪರಸ್ಥರಿಗೆ, ಕಂಪ್ಯೂಟರ್ ಜ್ಞಾನ ಇರುವುದಿಲ್ಲ ತೆರಿಗೆಯ ಎಲ್ಲ ವಿವರಗಳನ್ನು ಕಂಪ್ಯೂಟರ್ ಮೂಲಕವೇ ಸಲ್ಲಿಸಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿ.ಎಸ್.ಟಿ. ಕಾನೂನುಗಳು ದಿನದಿಂದ ದಿನಕ್ಕೆ ಜಠಿಲ ಆಗುತ್ತಿವೆ. ವ್ಯಾಪಾರಸ್ಥರ ಕಣ್ತಪ್ಪಿನಿಂದ ಹಾಗೂ ಯಾವುದೇ ದುರುದ್ದೇಶವಿಲ್ಲದೇ ಆದ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ. ಇದರಿಂದ ದಂಡ ಕಟ್ಟುವುದು ಅನಿವಾರ್ಯವಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಪ್ರಮುಖರಾದ ಜಫರುಲ್ಲಾ ಸತ್ತಾರ್ ಖಾನ್, ಸೈಯದ್ ವಾಹೀದ್ ಅಡ್ಡು, ಮೊಹಮ್ಮದ್ ಯಾಹ್ಯಾ, ಮಧುಸೂದನ್, ಸಂತೋಷ್, ಸಾದೀಕ್ ಹುಸೇನ್, ಮೊಹಮ್ಮದ್ ರಬ್ಬನ್, ಸಮೀರ್, ಸೈಯದ್ ಅಹಮ್ಮದ್, ಮಹಮ್ಮದ್ ರಪಿ ಸೇರಿಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.