ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಂಪಿಎಂ ಹೆಸರಿನಲ್ಲಿ ಅರಣ್ಯ ಖಾಸಗೀಕರಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಮೇಕರ್ ಚಳವಳಿ ಮತ್ತು ಅಭಿಯಾನವನ್ನು ಆರಂಭಿಸಲಾಗಿದೆ.
ಇದನ್ನೂ ಓದಿ | `ಹಾಡು ಹಕ್ಕಿಗೆ’ ಬಿರುದು ಸನ್ಮಾನ
ಜನವರಿ 7ರಂದು ನಗರದ ಸಿಸಿಎಫ್ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ಪರಿಸರ ಪ್ರೇಮಿಗಳ ಸ್ಪಂದನೆ ಸಿಗುತ್ತಿದೆ.
ಪೋಸ್ಟರ್ ಮೇಕರ್ ಚಳವಳಿಯಲ್ಲಿ ಹಲವು ಗಣ್ಯರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ದೇವರನೂರು ಮಹಾದೇವ, ಎಸ್.ಆರ್.ಹಿರೇಮಠ, ಕಡಿದಾಳು ಶಾಮಣ್ಣ, ಪ್ರೊ.ಎಲ್.ಕೆ.ಶ್ರೀಪತಿ, ಅಖಿಲೇಶ್ ಚಿಪ್ಪಳಿ, ಪ್ರೊ.ರಾಜೇಂದ್ರ ಚೆನ್ನಿ, ಕೆ.ಪಿ.ಶ್ರೀಪಾಲ ಹೀಗೆ ಹಲವರು ಇದಕ್ಕೆ ದನಿಗೂಡಿಸಿದ್ದಾರೆ.