ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮದ ಮಂಗಳೂರು ವಿಭಾಗದಿಂದ ಮಂಗಳೂರು, ಉಡುಪಿ, ಮಂತ್ರಾಲಯ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್ ನೂತನ ಸಾರಿಗೆಯನ್ನು ಜನವರಿ 14ರಿಂದ ಆರಂಭಿಸಲಾಗುತ್ತಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಾಣಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ಮಾರ್ಗ: ಮಂಗಳೂರು-ಉಡುಪಿ-ಮಂತ್ರಾಲಯ ವಯಾ ಉಡುಪಿ, ಕುಂದಾಪುರ, ಹಾಲಾಡಿ, ಸಿದ್ದಾಪುರ, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ, ಚೆನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ, ರಾಂಪುರ, ಬಳ್ಳಾರಿ, ಆಲೂರು, ಆದೋನಿ, ಮಾಧವರಂ ಮಾರ್ಗವಾಗಿ ಸಂಚರಿಸಲಿದೆ.
ವೇಳಾಪಟ್ಟಿ: ಮಂಗಳೂರಿನಿಂದ ಸಂಜೆ 3.30ಕ್ಕೆ ಹೊರಟು 4.45ಕ್ಕೆ ಉಡುಪಿ, 5.30ಕ್ಕೆ ಕುಂದಾಪುರ, 6.30ಕ್ಕೆ ಸಿದ್ದಾಪುರ, ಸಂಜೆ 7ಕ್ಕೆ ಮಾಸ್ತಿಕಟ್ಟೆ, 8.05ಕ್ಕೆ ತೀರ್ಥಹಳ್ಳಿ, 9.15ರಿಂದ 9.45 ಶಿವಮೊಗ್ಗಕ್ಕೆ ತಲುಪಲಿದೆ. ರಾತ್ರಿ 12.45ಕ್ಕೆ ಚಿತ್ರದುರ್ಗ, 3.15ರಿಂದ 3.20 ಬಳ್ಳಾರಿ ಮಾರ್ಗವಾಗಿ ಬೆಳಗ್ಗೆ 6.20ಕ್ಕೆ ಮಂತ್ರಾಲಯ ತಲುಪಲಿದೆ.
ಮರುದಿನ ಮಂತ್ರಾಲಯದಿಂದ ಸಂಜೆ 5.30ಕ್ಕೆ ಹೊರಟು 8.30ರಿಂದ 9ಕ್ಕೆ ಬಳ್ಳಾರಿ, ರಾತ್ರಿ 11.40 ಚಿತ್ರದುರ್ಗ, 2.25ರಿಂದ 3 ಶಿವಮೊಗ್ಗ, ಮುಂಜಾನೆ 4.10ಕ್ಕೆ ತೀರ್ಥಹಳ್ಳಿ, 5.15ಕ್ಕೆ ಮಾಸ್ತಿಕಟ್ಟೆ, ಬೆಳಗ್ಗೆ 6.30ಕ್ಕೆ ಕುಂದಾಪುರ, 7.15ಕ್ಕೆ ಉಡುಪಿ ಮಾರ್ಗವಾಗಿ ಬೆಳಗ್ಗೆ 8.40ಕ್ಕೆ ಮಂಗಳೂರು ತಲುಪಲಿದೆ.
ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸದುಪಯೋಗ ಪಡೆಯುವಂತೆ ಕೋರಲಾಗಿದೆ.