ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ನೀರಾವರಿ ನಿಗಮವು ತುಂಗಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ನೀರನ್ನು ಆಣೆಕಟ್ಟೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗಾಗಿ ನೀರಿನ ಶೇಖರಣೆ ಆಣೆಕಟ್ಟೆಯಲ್ಲಿ ಅತ್ಯವಶ್ಯಕವಾಗಿದ್ದು, ತೋಟಗಾರಿಕೆ ಮತ್ತು ಬೆಳೆದು ನಿಂತ ಬೆಳೆಗಳಿಗೆ ಮಾತ್ರ ನೀರನ್ನು ಕಾಲುವೆಯಲ್ಲಿ ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಎಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಗಣರಾಜ್ಯೋತ್ಸವ ಪೆರೇಡ್ನಲ್ಲಿ ಶಿವಮೊಗ್ಗ ರಂಗಾಯಣ ಖದರ್
ಈ ಭಾಗದಲ್ಲಿ ಬರುವ ರೈತರು ಬೇಸಿಗೆ ಬೆಳೆಗೆ ಭತ್ತದ ಬೆಳೆಯನ್ನು ಬೆಳೆಯದಂತೆ ಅವರು ಸೂಚಿಸಿದ್ದಾರೆ. ಬೇಸಿಗೆ ಬೆಳೆ ಭತ್ತಕ್ಕೆ ನೀರನ್ನು ಪೂರೈಸಲು ಸಾಧ್ಯ ಆಗದಿರುವುದನ್ನು ರೈತರಿಗೆ ಸ್ಪಷ್ಟಪಡಿಸಿದ್ದಾರೆ. ರೈತರು ಈ ಸೂಚನೆಯನ್ನು ನಿರ್ಲಕ್ಷಿಸಿ ಭತ್ತ ಬೆಳೆದು ಹಾನಿಯಾದ್ದಲ್ಲಿ ಬೆಳೆ ಪರಿಹಾರಕ್ಕೆ ಇಲಾಖೆ ಜವಾಬ್ದಾರಿ ಆಗಿರುವುದಿಲ್ಲ ಎಂದು ಹೇಳಿದ್ದಾರೆ.
ವೇಳಾಪಟ್ಟಿ: ಜನವರಿ 14ರಿಂದ 27ರ ವರೆಗೆ, ಫೆಬ್ರವರಿ 6ರಿಂದ 20ರ ವರೆಗೆ, ಮಾರ್ಚ್ 2ರಿಂದ 15, ಮಾರ್ಚ್ 25ರಿಂದ ಏಪ್ರಿಲ್ 8 ಮತ್ತು ಏಪ್ರಿಲ್ 18ರಿಂದ ಮೇ 1ರ ವರೆಗೆ ತುಂಗಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ನೀರು ವಿತರಣೆಯನ್ನು ನಿಲ್ಲಿಸಲಾಗುವುದು. ಜನವರಿ 5ರಿಂದ 13ರ ವರೆಗೆ, ಜನವರಿ 28ರಿಂದ ಫೆಬ್ರವರಿ 5, ಫೆಬ್ರವರಿ 21ರಿಂದ ಮಾರ್ಚ್ 1, ಮಾರ್ಚ್ 16ರಿಂದ 24, ಏಪ್ರಿಲ್ 9ರಿಂದ 17 ಹಾಗೂ ಮೇ 2ರಿಂದ 10ರ ವರೆಗೆ ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ.