ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಕ್ರಷರ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಸುಧಾಕರ್ ಎಂಬುವವರಿಗೆ ಸೇರಿದ ಕ್ರಷರ್ ಪರವಾನಗಿಯನ್ನು ಜಿಲ್ಲಾಡಳಿತ ರದ್ದು ಪಡಿಸಿದೆ.
VIDEO REPORT | ಹುಣಸೋಡು ಗ್ರಾಮದಲ್ಲಿ ಬೆಳಗ್ಗೆಯಿಂದ ಏನೇನಾಯ್ತು?
ಕುಲಕರ್ಣಿ ಎಂಬುವವರಿಗೆ ಈ ಜಮೀನು ಸೇರಿದ್ದು ಸುಧಾಕರ್ ಲೀಸ್ ಮೇಲೆ ಪಡೆದು ಕ್ರಷರ್ ನಡೆಸಲು ಪರವಾನಗಿ ಪಡೆದಿದ್ದ. ಆದರೆ, ಅಕ್ರಮವಾಗಿ ಪಕ್ಕದಲ್ಲಿಯೇ ಕ್ವಾರಿ ನಡೆಸಿದ್ದಲ್ಲದೇ ಭಾರಿ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಆಂಧ್ರ ಪ್ರದೇಶದಿಂದ ಸಾಗಿಸಿದ್ದ ಎಂಬ ಆರೋಪದ ಮೇರೆಗೆ ಈಗಾಗಲೇ ಆತನನ್ನು ಬಂಧಿಸಿದ್ದು, ಕ್ರಷರ್ ಪರವಾನಗಿಯನ್ನೂ ರದ್ದುಗೊಳಿಸಲಾಗಿದೆ.