ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುವ ಜನಶತಾಬ್ದಿ ರೈಲಿನ ವೇಳಾಪಟ್ಟಿ ಬದಲಾಗಿದ್ದು, ಜನವರಿ 31ರಿಂದ ಇದು ಅನ್ವಯಗೊಂಡಿದೆ. ಆದರೆ, ಮೊದಲ ದಿನ ಗೊಂದಲಕ್ಕೀಡಾದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿ ಕಳುಹಿಸಿದೆ. ಆದರೆ, ಭಾನುವಾರ ಈ ರೀತಿಯ ಘಟನೆ ಮರುಕಳುಹಿಸಿಲ್ಲ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಸಮಯ ಬದಲಾವಣೆ | ಮುಂಚೆ ಮುಂಜಾನೆ 5.30ಕ್ಕೆ ಶಿವಮೊಗ್ಗದಿಂದ ಹೊರಡುತ್ತಿದ್ದ (ರೈಲು ಸಂಖ್ಯೆ 02090) ರೈಲು ಜನವರಿ 31ರಿಂದ 15 ನಿಮಿಷ ಮುಂಚೆ ಅಂದರೆ, 5.15ಕ್ಕೆ ಶಿವಮೊಗ್ಗ ರೈಲು ನಿಲ್ದಾಣದಿಂದ ಹೊರಡುತ್ತಿದೆ. ಯಶವಂತಪುರ ಬದಲು ಬೆಂಗಳೂರು ನಗರ ರೈಲು ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ತಲುಪಲಿದೆ. ರೈಲು ಸಂಖ್ಯೆ 02089 ಬೆಂಗಳೂರಿಂದ ಸಂಜೆ 5.15 ಗಂಟೆಗೆ ಹೊರಟು ಶಿವಮೊಗ್ಗಕ್ಕೆ ರಾತ್ರಿ 9.55ಕ್ಕೆ ಬರಲಿದೆ.