ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಮ್ಮ ಹಳ್ಳಿ ಥಿಯೇಟರ್, ವಿಶ್ವಪಥ ಕಲಾ ಸಂಗಮ ವತಿಯಿಂದ ನಗರದ ರಂಗಾಯಣದ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಮೂರು ದಿನಗಳ ಹಳ್ಳಿ ಥೇಟ್ರು ನಾಟಕೋತ್ಸವ-2 ಆಯೋಜಿಸಲಾಗಿದೆ ಎಂದು ನಮ್ಮ ಹಳ್ಳಿ ಥಿಯೇಟರ್ ಖಜಾಂಚಿ ಚೇತನ್ ಸಿ.ರಾಯನಹಳ್ಳಿ ತಿಳಿಸಿದರು.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಗಳನ್ನು ಬುಕ್ ಮೈ ಶೋ ಮೂಲಕ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಆಸಕ್ತರು ಇದರ ಸೌಲಭ್ಯ ಪಡೆಯಬೇಕೆಂದು ಮನವಿ ಮಾಡಿದರು.
ಪ್ರದರ್ಶನಗೊಳ್ಳಲಿರುವ ನಾಟಕಗಳು
- ಫೆಬ್ರವರಿ 5ರಂದು ಹನುಮಂತ ಹಾಲಿಗೇರಿ ರಚನೆಯ ಭಾಸ್ಕರ್ ನೀನಾಸಂ ನಿರ್ದೇಶನದ ನಾಟಕ `ಊರು ಸುಟ್ಟರೂ ಹನುಮಪ್ಪ ಹೊರಗೆ’,
- ಫೆಬ್ರವರಿ 6ರಂದು ಹಾಸ್ಯ ಬರಹಗಾರ ಎಚ್.ಡುಂಡಿರಾಜ್ ರಚನೆಯ ಬಿ.ಅಶೋಕ್ ನಿರ್ದೇಶನದ `ಪುಕ್ಕಟೆ ಸಲಹೆ’
- ಫೆಬ್ರವರಿ 7ರಂದು ಪದ್ಮಭೂಷಣ ಡಾ. ಚಂದ್ರಶೇಖರ್ ಕಂಬಾರರ ಕಾದಂಬರಿ ಆಧಾರಿತ ಭಾಸ್ಕರ್ ನೀನಾಸಂ ರಂಗವಿನ್ಯಾಸ, ನಿರ್ದೇಶನದ `ಜೀಕೆ ಮಾಸ್ತರರ ಪ್ರಣಯ ಪ್ರಸಂಗ’
ಟಿಕೆಟ್ ದೊರೆಯುವ ಸ್ಥಳ
- ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ದುರ್ಗಿಗುಡಿ
- ರಾಯಲ್ ಕಾಫಿ, ನೆಹರೂ ರಸ್ತೆ
- ಶ್ರೀಲಕ್ಷ್ಮಿ ನಾರಾಯಣ ಸ್ವೀಟ್ಸ್ ಮತ್ತು ಬೇಕರಿ, ಪೊಲೀಸ್ ಚೌಕಿ
- ಡಿ.ಜೆ.ಫ್ಯಾನ್ಸಿ ವರ್ಲ್ಡ್, ದ್ರೌಪದಮ್ಮ ಸರ್ಕಲ್, ಗೋಪಾಳ
ಮಾಹಿತಿಗಾಗಿ ಸಂಪರ್ಕಿಸಿ | 9845014229, 9538020367, ಬುಕ್ ಮೈ ಶೋಗಾಗಿ | ಕ್ಲಿಕ್ ಮಾಡಿ
ಉದ್ಘಾಟನೆ | ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಫೆಬ್ರವರಿ 5ರಂದು ಸಂಜೆ 6.30 ಗಂಟೆಗೆ ನಾಟಕೋತ್ಸವವನ್ನು ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಉದ್ಘಾಟಿಸುವರು. ನಮ್ಮ ಹಳ್ಳಿ ಥಿಯೇಟರ್ ಅಧ್ಯಕ್ಷ ಪ್ರವೀಣ್ ಎಸ್.ಹಾಲ್ಮತ್ತೂರು ಅಧ್ಯಕ್ಷತೆ ವಹಿಸುವರು. ಫೆ.5ರಿಂದ 7ರ ವರೆಗೆ ನಾಟಕೋತ್ಸವ ನಡೆಯಲಿದೆ.
ಸಮಾರೋಪ | ಫೆಬ್ರವರಿ 7ರಂದು ಸಂಜೆ 6.30 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಪ್ರವೀಣ್ ಎಸ್.ಹಾಲ್ಮತ್ತೂರು ಅಧ್ಯಕ್ಷ ವಹಿಸುವರು. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸಮಾರೋಪ ನುಡಿಗಳನ್ನಾಡುವರು.
ಮಾಧ್ಯಮಗೋಷ್ಠಿಯಲ್ಲಿ ವಿಕಸಂ ಬೆಂಗಳೂರು ತಂಡದ ಕಲಾವಿದ ಮದುಸೂಧನ್, ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು.