ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗದಿಂದ ರಾಣೇಬೆನ್ನೂರಿಗೆ ಹೊಸ ಬಿ.ಜಿ. ರೈಲ್ವೆ ಮಾರ್ಗದ ಯೋಜನೆ ಇದ್ದು, ಈಗಾಗಲೇ ಈ ನಿಟ್ಟಿನಲ್ಲಿ ಹಲವು ಕಾರ್ಯಗಳನ್ನು ಮಾಡಲಾಗುತ್ತಿದೆ. ಹೀಗಾಗಿ, ಹಾರನಹಳ್ಳಿಗೆ ರೈಲ್ವೆ ಜಂಕ್ಷನ್ ಮಾಡುವಂತೆ ಆಗ್ರಹಿಸಿ ಹಾರನಹಳ್ಳಿ ರೈಲ್ವೆ ಜಂಕ್ಷನ್ ಹೋರಾಟ ಸಮಿತಿ ಬುಧವಾರ ಪ್ರತಿಭಟನೆ ನಡೆಸಿತು.
ಇದನ್ನೂ ಓದಿ । ಪ್ರತಿ ಎಕರೆ ಅಡಕೆ ತೋಟಕ್ಕೆ ₹ 2.50 ಕೋಟಿ ಪರಿಹಾರ ನೀಡಿ
ಶಿವಮೊಗ್ಗ, ಹಾರನಹಳ್ಳಿ, ಸೂರಗೊಂಡನಕೊಪ್ಪ, ಶಿಕಾರಿಪುರ, ರಾಣೇಬೆನ್ನೂರು ಮತ್ತು ಹೊಸ ಬಿ.ಜಿ. ರೈಲ್ವೆ ಮಾರ್ಗ ಮಾಡಿ ಹಾರನಹಳ್ಳಿಗೆ ಜಂಕ್ಷನ್ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಹಾರನಹಳ್ಳಿ ಮುಂದೆ ತಾಲ್ಲೂಕು ಕೇಂದ್ರವಾಗುವ ಎಲ್ಲ ಸೌಲಭ್ಯ ಹೊಂದಿದೆ. ಆದ್ದರಿಂದ ಇಲ್ಲಿಗೆ ಜಂಕ್ಷನ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹಾರನಹಳ್ಳಿ ರೈಲ್ವೆ ಜಂಕ್ಷನ್ ಹೋರಾಟ ಸಮಿತಿಯ ಅಧ್ಯಕ್ಷ ದುರ್ಗೋಜಿರಾವ್, ಗೌರವಾಧ್ಯಕ್ಷ ಗಾಜನೂರು ಷಣ್ಮುಕಪ್ಪ, ಜಯಪ್ಪ, ವಿರೇಶ್, ಜಗದೀಶ್ವರಯ್ಯ, ಭೋಜನಾಯ್ಕ ಭಾಗವಹಿಸಿದ್ದರು.