ಸುದ್ದಿ ಕಣಜ.ಕಾಂ
ಶಿವಮೊಗ್ಗ: ಯುವಕರ ತಂಡ ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲವಾಗಲಿದೆ. ಜಿಲ್ಲೆಯಲ್ಲಿ ಸಂಘಟನೆಗೆ ಪಣ ತೊಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಎಚ್.ಪಿ. ಗಿರೀಶ್ ಹೇಳಿದರು.
ಶುಕ್ರವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠಗೊಳಿಸಲಾಗುವುದು. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜಯಭೇರಿ ಬಾರಿಸಲಾಗುವುದು. ಅದಕ್ಕಾಗಿ ಅವಿರತ ಶ್ರಮ ವಹಿಸಲಾಗುವುದು ಎಂದು ತಿಳಿಸಿದರು.
2300 ಮತಗಳು ಪಡೆದು ಆಯ್ಕೆ | ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ 2,300 ಮತ ಗಳಿಸಿ ಅಧ್ಯಕ್ಷನಾಗಿ ಆಯ್ಕೆ ಆಗಿರುವುದಾಗಿ ತಿಳಿಸಿದರು.
2002 ಮತ ಪಡೆದ ಮಧುಸೂದನ್ ಉಪಾಧ್ಯಕ್ಷರಾಗಿ ಹಾಗೂ ಎಸ್.ಸಿ. ಮೀಸಲಾತಿಯಲ್ಲಿ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್, ಅರುಣ್ ಕುಮಾರ್, ಖಾಲಿಮ್ ಅಹಮ್ಮದ್, ಗಿರೀಶ್ ಎನ್. ಆಯ್ಕೆಗೊಂಡಿದ್ದಾರೆ.
ಶಿವಮೊಗ್ಗ ಉತ್ತರ ಬ್ಲಾಕ್ ಅಧ್ಯಕ್ಷ ಬಿ.ಲೋಕೇಶ್, ಉಮೇಶ್, ರಾಕೇಶ್, ಆಫ್ತಾಬ್ ಅಹಮ್ಮದ್, ಕಿರಣ್, ಬಾಲು ಉಪಸ್ಥಿತರಿದ್ದರು.