ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲ್ಲಾಪುರ ವಿದ್ಯುತ್ ವಿತರಣಾ ಕೇಂದ್ರದ ನಿರಂತರ ಜ್ಯೋತಿ ಯೋಜನೆಯಡಿ ಅನೇರಿ ಫೀಡರ್ ನಲ್ಲಿ 11 ಕೆವಿ ಏರಿಯಲ್ ಬಂಚ್ ಕೇಬಲ್ ಎಳೆಯುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಫೆಬ್ರವರಿ 6 ರಿಂದ 9ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5.30 ಗಂಟೆಯವರೆಗೆ ಶಿವಮೊಗ್ಗ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ । ಹುಣಸೋಡು ಬ್ಲಾಸ್ಟ್, ಮತ್ತೆ ನಾಲ್ವರು ಅರೆಸ್ಟ್, ಹೇಗೆ ನಡೀತು ಪೊಲೀಸ್ ಕಾರ್ಯಾಚರಣೆ?
ಎಲ್ಲೆಲ್ಲಿ ಕರೆಂಟ್ ಕಟ್ | ಆನವೇರಿ, ಸೈದರಕಲ್ಲಹಳ್ಳಿ, ನಿಂಬೆಗೊಂದಿ, ಮಂಗೋಟೆ, ಮೈದೊಳಲು, ಗುಡುಮಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನವೇರಿ, ಇಟಿಗೆಹಳ್ಳಿ, ಇಟ್ಟಿಗೆಹಳ್ಳಿ ಕ್ಯಾಂಪ್, ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಶ್ರೀಹರಿಪುರ, ಆದ್ರಿಹಳ್ಳಿ, ದಿಗ್ಗೇನಹಳ್ಳಿ, ನಿಂಬೆಗೊಂದಿ, ಅರಿಶಿನಘಟ್ಟ, ಅರಿಶಿನಘಟ್ಟ ತಾಂಡ, ವಡೇರಪುರ, ಮಂಗೋಟೆ, ನಾಗಸಮುದ್ರ, ಗುಡುದಮ್ಮನಹಳ್ಳಿ, ಮೈದೊಳಲು, ಮಲ್ಲಾಪುರ, ಕಲ್ಲಜ್ ನಾಳ್, ಗುಡುಮಘಟ್ಟೆ, ತಡಸ, ಮಲ್ಲಿಗೇನಹಳ್ಳಿ, ಲಕ್ಷ್ಮೀಪುರ ಕ್ಯಾಂಪ್, ಜಂಗಮರಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮ.
ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.