ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ತಲುಪಿಸುವ ಕಾರ್ಯ ಶುಕ್ರವಾರ ಮಧ್ಯಾಹ್ನ ಅಂತ್ಯಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ । ಭದ್ರಾ ಅಭಯಾರಣ್ಯ ಸೇರಿದ ಕಾಡಾನೆ, ಇವತ್ತು ಬೆಳಗ್ಗೆಯಿಂದ ಏನೇನಾಯ್ತು, ಹೇಗಿತ್ತು ಕಾರ್ಯಾಚರಣೆ?
ಬುಧವಾರ ಬೆಳಗ್ಗೆ 9 ಗಂಟೆಯಿಂದ ಸತತ ಏಳು ಗಂಟೆಗಳ ಕಾರ್ಯಾಚರಣೆ ನಂತರ ಮೂರು ಕಾಡಾನೆಗಳನ್ನು ಅವುಗಳ ಮೂಲಸ್ಥಾನಕ್ಕೆ ತಲುಪಿಸಲಾಗಿದೆ. ಆದರೂ ತೆಂಗು, ಅಡಕೆಯ ರುಚಿ ನೋಡಿರುವ ಆನೆಗಳು ಮತ್ತೆ ಕಾಡಿನಿಂದ ನಾಡಿಗೆ ನುಗ್ಗಬಹುದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಹಾಗೂ ಸಕ್ರೆಬೈಲು ಆನೆಬಿಡಾರದ ಸಿಬ್ಬಂದಿ ರಾತ್ರಿ ಕಾಕನಹಸೂಡಿಯಲ್ಲಿ ಬೀಡು ಬಿಟ್ಟಿದ್ದರು. ಶುಕ್ರವಾರ ಬೆಳಗ್ಗೆ ಸಹ ಸಾಕಾನೆಗಳ ಮೂಲಕ ಕೋಂಬಿಂಗ್ ಮಾಡಲಾಗುತ್ತಿದೆ. ಆದರೆ, ಆನೆಗಳ ಚಲನವಲನ ಎಲ್ಲಿಯೂ ಕಂಡುಬಂದಿಲ್ಲ. ಹೀಗಾಗಿ, ಇಂದು ಮಧ್ಯಾಹ್ನ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂದು ಅಧಿಕೃತ ಮೂಲಗಳು `ಸುದ್ದಿ ಕಣಜ’ಕ್ಕೆ ಮಾಹಿತಿ ನೀಡಿದ್ದಾರೆ.
ಗಜ ಪಡೆ | ಸಕ್ರೆಬೈಲು ಆನೆಬಿಡಾರದ ಸಾಗರ, ಬಾಲು ಮತ್ತು ಸೋಮ ಮೂರು ಗಂಡಾನೆಗಳನ್ನು ಕಾರ್ಯಾಚರಣೆಗೋಸ್ಕರ ಕರೆತರಲಾಗಿದೆ. ಆದರೆ, ಇವುಗಳನ್ನು ಕೋಂಬಿಂಗ್ ಗೋಸ್ಕರ ಮಾತ್ರ ಬಳಸಿಕೊಂಡಿದ್ದು, ಆನೆಗಳನ್ನು ಮೂಲಸ್ಥಾನಕ್ಕೆ ಅಟ್ಟಲು ಬಳಸಿಲ್ಲ.